Advertisement

ಸಂಚಾರ ಪೇದೆ ಮೇಲೆ ಹಲ್ಲೆ: ಕಾರು ಚಾಲಕ ಸೆರೆ

07:13 AM Jan 10, 2019 | |

ಕೆ.ಆರ್‌.ಪುರ: ಕರ್ತವ್ಯನಿರತ ಸಂಚಾರ ಪೊಲೀಸ್‌ ಪೇದೆ ಮೇಲೆ ಕಾರು ಚಾಲಕ ಹಲ್ಲೆ ನಡೆಸಿರುವ ಘಟನೆ ಮಹದೇವಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಲೌರಿ ಜಂಕ್ಷನ್‌ ಬಳಿ ಬುಧವಾರ ನಡೆದಿದೆ.ಕೆ ಆರ್‌ ಪುರ ಸಂಚಾರ ಪೊಲೀಸ್‌ ಠಾಣೆಯ ಮುಖ್ಯ ಪೇದೆ ಪೂಜಪ್ಪ ಹಲ್ಲೆಗೊಳಗಾದವರು.

Advertisement

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಕಾರು ಚಾಲಕ ರಾಕೇಶ್‌ ಎಂಬಾತನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ಬುಧವಾರ ಬೆಳಗ್ಗೆ 10.15ರ ಸುಮಾರಿಗೆ ಪೊಲೀಸ್‌ ಪೇದೆ ಪೂಜಪ್ಪ ಲೌರಿ ಜಂಕ್ಷನ್‌ ಬಳಿ ಕಾರ್ಯನಿರ್ವಹಿಸುತ್ತಿದ್ದರು. ಹೆಚ್ಚಿನ ವಾಹನ ದಟ್ಟಣೆ ಇದ್ದ ಕಾರಣ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿದ್ದವು. ಈ ಸಂಧರ್ಭದಲ್ಲಿ ತನ್ನ ಕಾರಿಗೆ ಆಟೋಡಿಕ್ಕಿ ಹೊಡೆದಿದೆ ಎಂದು ರಾಕೇಶ್‌ ರಸ್ತೆ ಮಧ್ಯೆಯೆ ಕಾರನ್ನು ನಿಲ್ಲಿಸಿ ಆಟೋ ಚಾಲಕನೊಂದಿಗೆ ಜಗಳವಾಡಿದ್ದಾನೆ. ಇದನ್ನು ಗಮನಿಸಿದ ಪೂಜಪ್ಪ, ಎರಡೂ ವಾಹನಗಳನ್ನು ರಸ್ತೆಬದಿಗೆ ನಿಲ್ಲಿಸುವಂತೆ ಸೂಚಿಸಿದ್ದಾರೆ.

ಇದರಿಂದ ಆಕ್ರೋಶ ಗೊಂಡ ರಾಕೇಶ್‌ ಆವಾಚ್ಯ ಪದಗಳಿಂದ ನಿಂದಿಸಿದ ಪರಿಣಾಮ ಇಬ್ಬರ ನಡುವೆ ಜಗಳ ಶುರುವಾಗಿದೆ. ಬಳಿಕ ರಾಕೇಶ್‌, ಪೂಜಪ್ಪನವರ ಮೇಲೆ ಹಲ್ಲೆ ನಡೆಸಿ ಬಲವಾಗಿ ತಳ್ಳಿದ ಪರಿಣಾಮ ಆಟೋ ಮೇಲೆ ಬಿದ್ದು ಅವರ ತಲೆಗೆ ಪೆಟ್ಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next