Advertisement

ಬಸ್‌ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ; ಇಬ್ಬರು ಆಸ್ಪತ್ರೆಗೆ

12:27 PM Feb 17, 2018 | Team Udayavani |

ಮಂಗಳೂರು: ಚಲಿಸುತ್ತಿದ್ದ ಬಸ್‌ ಅಡ್ಡಗಡ್ಡಿ ಒಳನುಗ್ಗಿದ ಗುಂಪೊಂದು ಐವರು ವಿದ್ಯಾರ್ಥಿಗಳಿಗೆ ಹಿಗ್ಗಾಮುಗ್ಗಾ ಥಳಿಸಿ ಪರಾರಿಯಾದ ಕಳವಳಕಾರಿ ಘಟನೆ ತಲಪಾಡಿ ಜಂಕ್ಷನ್‌ ನಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. 

Advertisement

ತಲಪಾಡಿ ನಡುವೆ ಸಂಚರಿಸುವ ಖಾಸಗಿ ಬಸ್ ತಡೆದ ಕೇರಳ ಹೊಸಂಗಡಿ ಮೂಲದ ತಂಡ ಹಲ್ಲೆ ನಡೆಸಿದೆ ಎನ್ನಲಾಗಿದೆ. 

ಹಲ್ಲೆಗೊಳಗಾದ ಐವರ ಪೈಕಿ ಇಬ್ಬರು  ಕುಂಜತ್ತೂರು ನಿವಾಸಿ ಇಮ್ರಾನ್ ಮತ್ತು ಫಯಾಝ್ ಎನ್ನುವವರು  ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರೂ ಮಿಲಾಗ್ರಿಸ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. 

ಹಲ್ಲೆಗೊಳಗಾದ ಇತರೆ ಮೂವರು ವಿದ್ಯಾರ್ಥಿಗಳು ಸಣ್ಣ ಪುಟ್ಟ ಗಾಯಗೊಂಡು ಕಾಲೇಜಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. 

Advertisement

ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪದಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿದೆ. 

ವಿದ್ಯಾರ್ಥಿನಿ ವಿಚಾರದಲ್ಲಿ  ತಿಂಗಳ ಹಿಂದೆಯೂ ಗಲಾಟೆ ತಂಡ ಗಲಾಟೆ ನಡೆಸಿತ್ತು ಎನ್ನಲಾಗಿದೆ. 

ಉಳ್ಳಾಲ ಪೊಲೀಸರಿಂದ ಹಲ್ಲೆ ನಡೆಸಿದವರಿಗಾಗಿ  ಶೋಧ ಮುಂದುವರಿದಿದೆ. 

Advertisement

Udayavani is now on Telegram. Click here to join our channel and stay updated with the latest news.

Next