Advertisement

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

11:55 PM Jun 25, 2024 | Team Udayavani |

ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಬಿಸಿಲೆ ಘಾಟ್‌ ಸಮೀಪದ ಸಕಲೇಶಪುರ ತಾಲೂಕು ವ್ಯಾಪ್ತಿಯ ಪ್ರವಾಸಿ ತಾಣ ಪಟ್ಲಬೆಟ್ಟಕ್ಕೆ ತೆರಳಿದ್ದ ಮಂಗಳೂರಿನ ಯುವಕರ ತಂಡದ ಮೇಲೆ ಅಲ್ಲಿನ ವ್ಯಕ್ತಿಗಳು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಸಲೂರು ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

Advertisement

ಮಂಗಳೂರಿನ ಕೊಟ್ಟಾರದ ಯುವಕ ತನ್ನ ಗೆಳೆಯರೊಂದಿಗೆ ಜೂ. 23ರಂದು ಪಟ್ಲಬೆಟ್ಟಕ್ಕೆ ಪ್ರವಾಸ ತೆರಳಿ ಪ್ರವಾಸಿ ತಾಣ ವೀಕ್ಷಿಸಿ ಹಿಂತಿರುಗುವ ವೇಳೆ ಪಟ್ಲಬೆಟ್ಟದ ಪ್ರವೇಶ ದಾರಿಯಲ್ಲಿದ್ದ ಬಾಡಿಗೆ ಚಾಲಕರು ಪ್ರವಾಸಕ್ಕೆ ತೆರಳಿದ್ದ ಮಂಗಳೂರಿನ ಯುವಕರ ತಂಡವನ್ನು ಅಡ್ಡಗಟ್ಟಿ ಮೊದಲು ಕೆಟ್ಟ ಪದಗಳನ್ನು ಬಳಸಿ ಶೋಷಣೆ ಮಾಡಿದ್ದಾರೆ ಎಂದು ದೂರು ನೀಡಲಾಗಿದ್ದು, ಗೂಂಡಗಿರಿ ನಡೆಸಿದ ಆರೋಪಿಗಳಾದ ಗಗನ್‌, ಕಿರಣ್‌, ನಿಶಾಂತ್‌ ಹಾಗೂ ಮದನ್‌ ಅವರ ಮೇಲೆ ಕಠಿನ ಕ್ರಮಕ್ಕೆ ಈಮೇಲ್‌ ಮೂಲಕ ಮಂಗಳೂರಿನ ಭವಿತ್‌ ಅವರು ಯಸಲೂರು ಠಾಣೆಗೆ ದೂರು ಸಲ್ಲಿಸಿದ್ದರು. ಯಸಲೂರು ಪೊಲೀಸರು ತನಿಖೆ ನಡೆಸಿ ಕೃತ್ಯ ಎಸಗಿದ ಆರೋಪದಲ್ಲಿ ನಾಲ್ವರನ್ನು ಬಂಧಿಸಿದ್ದಾರೆ.

ಮಂಗಳೂರಿನ ಯುವಕರ ಮೇಲೆ ಹಲ್ಲೆ ನಡೆಸಿದ ವೀಡಿಯೋ ವೈರಲ್‌ ಆಗಿ ಬಾರೀ ಆಕ್ರೋಶ ವ್ಯಕ್ತವಾಗಿತ್ತು. ಪಟ್ಲಬೆಟ್ಟ ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಂದ ನಿಯಮಬಾಹಿರ ಸುಲಿಗೆ ಕೃತ್ಯ ನಡೆಸುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಸುಬ್ರಹ್ಮಣ್ಯದ ಯುವಕರ ತಂಡ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಮಂಗಳವಾರ ಸುಬ್ರಹ್ಮಣ್ಯದಲ್ಲಿ ಮನವಿ ಮಾಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next