Advertisement

Surathkal: ನಿಗೂಢ ಸ್ಫೋಟ; ಬೆಚ್ಚಿ ಬಿದ್ದ ಜನತೆ; ನಿಟ್ಟುಸಿರು

12:10 AM Sep 27, 2024 | Team Udayavani |

ಸುರತ್ಕಲ್‌: ಸುರತ್ಕಲ್‌ ಸಮೀಪದ ಗಣೇಶಪುರದಲ್ಲಿ ಮಧ್ಯಾಹ್ನದ ವೇಳೆ ಕೈಕಂಬ ಮಂಗಳಪೇಟೆ ರಸ್ತೆ ಬದಿ ನಿಗೂಢ ನ್ಪೋಟದ ಶಬ್ದ ಕೇಳಿ ಬಂದು ಜನತೆ ಬೆಚ್ಚಿಬಿದ್ದ ಘಟನೆ ನಡೆದಿದೆ.

Advertisement

ಸಮೀಪದ ರಿಕ್ಷಾ ಚಾಲಕರು, ಜನರು ಏನಾಯಿತು ಎಂದು ಸುತ್ತಮುತ್ತ ಹುಡುಕಾಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರಿಗೂ ಮಾಹಿತಿ ನೀಡಿದರು.

ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಸಿಲಿಂಡರ್‌ ಮಾರಾಟ ಮಳಿಗೆಯಲ್ಲಿ ನಾಬ್‌ ಸಿಕ್ಕಿಸುವ ವೇಳೆ ಅದು ಆಕಸ್ಮಿಕವಾಗಿ ಹಾರಿದ ಕಾರಣ ಶಬ್ದ ಉಂಟಾಗಿದೆ ಎಂದು ತಿಳಿದುಬಂದಿದೆ. ಅನಂತರ ಅಲ್ಲಿನ ಜನ ನಿಟ್ಟುಸಿರು ಬಿಟ್ಟರು.

 

Advertisement

Udayavani is now on Telegram. Click here to join our channel and stay updated with the latest news.

Next