Advertisement

Gangolli ತೆಂಗಿನಕಾಯಿ ವಿಚಾರದಲ್ಲಿ ಹಲ್ಲೆ: ದೂರು

12:18 AM Dec 18, 2023 | Team Udayavani |

ಗಂಗೊಳ್ಳಿ: ತೆಂಗಿನಕಾಯಿ ತೆಗೆಯುವ ವಿಚಾರದಲ್ಲಿ ಪರಸ್ಪರ ಹಲ್ಲೆ, ಬೆದರಿಕೆ ಹಾಕಿದ ಕುರಿತು ಪ್ರಕರಣ ದಾಖಲಾಗಿದೆ.

Advertisement

ನೂಜಾಡಿ ಗ್ರಾಮದ ಪ್ರಭಾವತಿ (39) ಅವರು ಮಗ ಪ್ರಧಾನ್‌ ಜತೆ ತೋಟಕ್ಕೆ ಹೋದಾಗ ನಂದಿ ಮತ್ತು ರಾಘವೇಂದ್ರ ಅವರು ಅಕ್ರಮ ಪ್ರವೇಶಿಸಿ ತೆಂಗಿನ ಕಾಯಿಗಳನ್ನು ತೆಗೆದು ಹೊತ್ತುಕೊಂಡು ಹೋಗುತ್ತಿದ್ದರು. ಈ ಸಂದರ್ಭ ವಾಗ್ವಾದ ನಡೆದು ಹಲ್ಲೆ ನಡೆದು ಜೀವ ಬೆದರಿಕೆ ಹಾಕಲಾಗಿದೆ.

ಇದೇ ಪ್ರಕರಣದಲ್ಲಿ ಅದೇ ಗ್ರಾಮದ ರಾಘವೇಂದ್ರ (41) ಅವರು ದೂರು ನೀಡಿದ್ದು, ಅವರು ಪ್ರಪುಲ್ಲಾ ಶೆಡ್ತಿ ಅವರಿಗೆ ಸೇರಿದ ಜಾಗದಲ್ಲಿ ತೆಂಗು ಮತ್ತು ಅಡಿಕೆ ತೋಟವನ್ನು ಗುತ್ತಿಗೆ ಆಧಾರದಲ್ಲಿ ನೋಡಿಕೊಂಡಿದ್ದು, ಕಾಯಿಗಳನ್ನು ಕೆಲಸದವರು ತೆಗೆಯುತ್ತಿದ್ದಾಗ ಸುದೇಶ ಶೆಟ್ಟಿ ಮತ್ತು ಪ್ರಭಾವತಿ ಶೆಡ್ತಿ ಅವರು ಕೆಲಸದವರನ್ನು ತಡೆದು ಹಲ್ಲೆ ನಡೆಸಿದ್ದು, ರಾಘವೇಂದ್ರ ಹಾಗೂ ತಂದೆ ನಂದಿ ಅವರ ಮೇಲೆಯೂ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next