Advertisement

ಮಲ್ಪೆ ಬಂದರಿನಲ್ಲಿ ಬಂಟ್ವಾಳದ ಯುವಕನ ಮೇಲೆ ಮುಸುಕುಧಾರಿಗಳಿಂದ ಹಲ್ಲೆ

10:21 AM Jun 08, 2019 | Team Udayavani |

ಮಲ್ಪೆ: ಮೀನು ವ್ಯಾಪಾರದ ಉದ್ದೇಶದಿಂದ ಉಡುಪಿಯ ಮಲ್ಪೆ ಬಂದರಿಗೆ ಬಂದಿದ್ದ ಫರಂಗಿ ಪೇಟೆಯ ಯುವಕನ ಮೇಲೆ ಅಪರಿಚಿತ ಮುಸುಕುಧಾರಿಗಳು ದಾಳಿ ನಡೆಸಿದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.

Advertisement

ದಾಳಿಗೊಳಗಾದ ಯುವಕನನ್ನು ಬಂಟ್ವಾಳದ ಫರಂಗಿ ಪೇಟೆ ನಿವಾಸಿ ರಿಯಾಝ್ (32) ವರ್ಷ ಎಂದು ಗುರುತಿಸಲಾಗಿದೆ. ತೀವ್ರ ಗಾಯಗೊಂಡಿರುವ ರಿಯಾಜ್ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶುಕ್ರವಾರ ಮುಂಜಾನೆ 4.30ರ ಸುಮಾರಿಗೆ ರಿಯಾಜ್ ಸ್ನೇಹಿತರೊಂದಿಗೆ ತನ್ನ ಮೀನಿನ ವಾಹನದಲ್ಲಿ ಮಲ್ಪೆಗೆ ಆಗಮಿಸಿದ್ದರು. ಈ ವೇಳೆ ಅವರನ್ನು ಹಿಂಬಾಲಿಸಿಕೊಂಡು ವಾಹನದಲ್ಲಿ ಬಂದಿದ್ದ ನಾಲ್ವರು ಮುಸುಕುಧಾರಿಗಳು ತಲಾವಾರಿನಿಂದ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ದಾಳಿಯಿಂದಾಗಿ ರಿಯಾಜ್ ಅವರ ಕುತ್ತಿಗೆ ಭಾಗ ಮತ್ತು ಕೈಗೆ ಗಾಯವಾಗಿದ್ದು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next