Advertisement

ಕರೆಂಟ್ ಬಿಲ್ ಕೊಡಲು ಹೋದ ಬೆಸ್ಕಾಂ ಸಿಬಂದಿಗಳ ಮೇಲೆ ಹಲ್ಲೆ

09:36 PM Jul 09, 2023 | Team Udayavani |

ರಾಮನಗರ: ಕರೆಂಟ್ ಬಿಲ್ ಕೊಡಲು ಹೋದ ಬೆಸ್ಕಾಂ ಸಿಬಂದಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ರಾಮನಗರದ ಟಿಪ್ಪು ನಗರದಲ್ಲಿ ನಡೆದಿದೆ.

Advertisement

ರಫೀಕ್, ಚಿನ್ಮಯ್ ಹಲ್ಲೆಗೊಳಗಾದ ಬೆಸ್ಕಾಂ ಸಿಬಂದಿಗಳಾಗಿದ್ದು, ನಗರದಲ್ಲಿ ಜೂನ್ ತಿಂಗಳ ಬಿಲ್‌ ನೀಡುತ್ತಿದ್ದರು. ಕರೆಂಟ್ ಬಿಲ್ ಕೊಡುತ್ತಿದ್ದಂತೆ ಸರ್ಕಾರ ಫ್ರೀ ಕೊಟ್ಟಿದ್ದರೂ ಬಿಲ್ ನೀಡಲು ಬಂದಿದ್ದೀರಾ ಎಂದು ಸಿಬಂದಿಗಳಿಗೆ ಧಮ್ಕಿ ಹಾಕಲಾಗಿದೆ. ಈ ವೇಳೆ ಮಾತಿನ ಚಕಮಕಿ ನಡೆದು ಗಲಾಟೆ ನಡೆದಿದೆ.

ಏಕಾಏಕಿ ಸಿಬಂದಿಗಳ ಮೇಲೆ ಹಲ್ಲೆ ನಡೆಸಲಾಗಿದ್ದು, ಈ ಸಂಬಂಧ ರಾಮನಗರ ಟೌನ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next