Advertisement

ಹಳೆ ವೈಷಮ್ಯ :ಜೈಲಿನಿಂದ ಹೊರ ಬಂದ ವ್ಯಕ್ತಿಯ ಕೊಚ್ಚಿ ಭೀಕರ ಕೊಲೆ

07:05 PM Nov 03, 2021 | Team Udayavani |

ಕುಣಿಗಲ್ : ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನು ಮೇಲೆ ಬಿಡುಗಡೆಯಾಗಿ ಬಂದಿದ್ದ ಆರೋಪಿಯನ್ನು ಮಾರಕಾಸ್ತಾçಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಕೀಲಾರ ಗ್ರಾಮದಲ್ಲಿ ನಡೆದಿದೆ.

Advertisement

ಕಿಲಾರ ಗ್ರಾಮದ ನಿಂಗೇಗೌಡ (45) ಕೊಲೆಯಾದ ವ್ಯಕ್ತಿ.

ಘಟನೆ ವಿವರ
ಕಳೆದ ಗ್ರಾ.ಪಂ ಚುನಾವಣೆ ಸಂದರ್ಭದಲ್ಲಿ ರಾಜಕೀಯ ದ್ವೇಶ ಹಿನ್ನಲೆಯಲ್ಲಿ ಕೀಲಾರ ಗ್ರಾಮದ ರೌಡಿಶೀಟರ್ ವಿನಯ್ ಎಂಬುವವನ್ನು ನಿಂಗೇಗೌಡ, ಶಶಿಕಲಾ, ಪ್ರಕಾಶ್ ಸೇರಿದಂತೆ ಐವರು ಸೇರಿಕೊಂಡು ಕೊಲೆ ಮಾಡಿದ್ದರು, ಈ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನಿಂಗೇಗೌಡ ಸೇರಿದಂತೆ ಐದು ಮಂದಿ ಜೈಲು ಸೇರಿದ್ದರು.

ಮೊನ್ನೆಯಷ್ಟೇ ನಿಂಗೇಗೌಡ ಜಾಮೀನನ ಮೇಲೆ ಬಿಡುಗಡೆಯಾಗಿ ಬಂದಿದ್ದ.

ಕಳೆದ ರಾತ್ರಿ ಗ್ರಾಮಕ್ಕೆ ಹೊಂದಿಕೊಂಡಿರುವ ಬೇಲಿ ಪೊದೆ ಬಳಿ ನಿಂಗೇಗೌಡ ಹೋಗುತ್ತಿರಬೇಕಾದರೆ ದುಷ್ಕರ್ಮಿಗಳು ಆತನ ತಲೆ ಹಿಂಬಾಗಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

Advertisement

ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಎಸ್ಪಿ ಉದೇಶ್, ಡಿವೈಎಸ್‌ಪಿ ಜಿ.ಆರ್.ರಮೇಶ್, ಸಿಪಿಐ ಗುರುಪ್ರಸಾದ್, ಪಿಎಸ್‌ಐ ಚೇತನ್ ಬೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next