Advertisement

ಗುಡಿಬಂಡೆ: ಪಟ್ಟಣ ಪಂಚಾಯಿತಿ ಸದಸ್ಯನಿಂದ ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ

05:13 PM May 29, 2022 | Team Udayavani |

ಗುಡಿಬಂಡೆ: ಪಟ್ಟಣ ಪಂಚಾಯಿತಿ ಸದಸ್ಯ ಹಾಗೂ ಆತನ ಸಂಬಂಧಿಕರು ನಾಲ್ವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

Advertisement

ಪಟ್ಟಣ ಪಂಚಾಯಿತಿ 5ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯ ಗಂಗರಾಜ ಅಲಿಯಾಸ್ ಕಂಬಿರಾಜು ಮತ್ತು ಆತನ ಸಂಬಂಧಿಕರಿಂದ ಅದೇ ವಾರ್ಡ್‌ಗೆ ಸೇರಿದ ಸಂದೀಪ್, ಗಣೇಶ್ ಸೇರಿದಂತೆ ಒಟ್ಟು ನಾಲ್ಕು ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಶನಿವಾರ ರಾತ್ರಿ ಗಾಯಾಳು ಗಣೇಶ್ ರವರ ಮನೆಯ ಮಕ್ಕಳು ಆಟ ಅಡುತ್ತಿದ್ದು, ಆ ಸಮಯದಲ್ಲಿ ಮಕ್ಕಳನ್ನು ಮನೆಗೆ ಹೋಗಿ ರಾತ್ರಿಯಾಯಿತು ಎಂದು ಬೈದು ಮನೆಗೆ ಕಳಿಸುತ್ತಿರುವಾಗ ಗಂಗರಾಜು ಮತ್ತು ಅವರ ಸಂಬಂಧಿಕರು ಏಕಾಏಕಿ ದಾಳಿ ಮಾಡಿ ಗಣೇಶ್, ಪತ್ನಿ, ತಂದೆ, ಸಂದೀಪ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಸಂದೀಪ್ , ಗಣೇಶ್  ಗೆ ಗಂಬೀರ ಗಾಯಗಳಾಗಿದ್ದು, ಗಾಯಾಳುಗಳಿಗೆ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.

ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next