Advertisement

ಎಂ.ಟಿ. ರಸ್ತೆ: ಅರ್ಧದಲ್ಲಿ ಬಾಕಿಯಾದ ಚರಂಡಿ ದುರಸ್ತಿ!

12:31 AM Jun 22, 2019 | mahesh |

ನಗರ: ನಗರದ ಎಂ.ಟಿ. ರಸ್ತೆಯಲ್ಲಿ ಹೊಸದಾಗಿ ಅಳವಡಿಸಲಾದ ಕಾಂಕ್ರೀಟ್ ರಸ್ತೆ ಬದಿ ಚರಂಡಿ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿ ಪರಿವರ್ತನೆಗೊಂಡಿದೆ.

Advertisement

ಎಂ.ಟಿ. ರಸ್ತೆಯಲ್ಲಿ ನೂತನವಾಗಿ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿದೆ. ಇದೇ ಸಂದರ್ಭದಲ್ಲಿ ನೀರು ಹರಿಯುವ ಚರಂಡಿ ವ್ಯವಸ್ಥೆಯನ್ನೂ ಸಮರ್ಪಕಗೊಳಿಸಲಾಗುವುದು ಎಂದು ಸ್ಥಳೀಯಾಡಳಿತ ನಗರಸಭೆ ಭರವಸೆ ನೀಡಿತ್ತು. ಕಾಂಕ್ರೀಟ್ ರಸ್ತೆ ಇತ್ತೀಚೆಗೆ ಸಂಚಾರಕ್ಕೆ ಮುಕ್ತಗೊಂಡಿತ್ತು. ಆದರೆ ಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ಪೂರ್ಣಗೊಳಿಸಿಲ್ಲ.

ಚರಂಡಿಯನ್ನು ಪೂರ್ಣಗೊಳಿಸದೇ ಇರುವುದರಿಂದ ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಜತೆಗೆ ತ್ಯಾಜ್ಯಗಳೂ ತುಂಬಿಕೊಂಡಿವೆ. ಇಲ್ಲಿಯೇ ಪರ್ಲಡ್ಕ ಭಾಗಗಳಿಗೆ ಹೋಗುವ ರಿಕ್ಷಾಗಳ ಪಾರ್ಕಿಂಗ್‌ ವ್ಯವಸ್ಥೆ ಇದೆ. ಚರಂಡಿಯಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪ್ಪತ್ತಿಯಾಗಿರುವುದರಿಂದ ಮತ್ತು ದುರ್ನಾತ ಬೀರುತ್ತಿರುವುದರಿಂದ ಈ ಭಾಗದಲ್ಲಿ ಸಾಗುವ ವಾಹನಗಳು, ಪಾರ್ಕಿಂಗ್‌ನಲ್ಲಿನ ರಿಕ್ಷಾ ಚಾಲಕರು ತೊಂದರೆ ಅನುಭವಿಸುವಂತಾಗಿದೆ. ರೋಗ ಹರಡುವ ಭಯವೂ ಎದುರಾಗಿದೆ.

ಕ್ರಮಕ್ಕೆ ಆಗ್ರಹ
ಮಳೆಗಾಲದಲ್ಲಿ ರಸ್ತೆ ಚರಂಡಿ ದುರಸ್ತಿಗೊಳಿಸಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿದ್ದರೆ ಈ ಸಮಸ್ಯೆಗಳು ಉದ್ಭವಿಸಲು ಸಾಧ್ಯವಿರಲಿಲ್ಲ. ಇನ್ನಾದರೂ ನಗರಸಭೆ ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂಬುದು ಇಲ್ಲಿನ ರಿಕ್ಷಾ ಚಾಲಕರ ಹಾಗೂ ಸ್ಥಳೀಯರ ಆಗ್ರಹವಾಗಿದೆ.

ಸಮಸ್ಯೆಗೆ ಮುಕ್ತಿ ಕೊಡಿ

ಕಾಮಗಾರಿಯನ್ನು ಅರ್ಧದಲ್ಲಿ ಬಿಟ್ಟು ಹೋಗಿದ್ದಾರೆ. ಚರಂಡಿಗೆ ಸ್ಲ್ಯಾಬ್‌ಗಳನ್ನೂ ಅಳವಡಿಸಿಲ್ಲ. ತ್ಯಾಜ್ಯಗಳೂ ತುಂಬಿರುವುದರಿಂದ ಇಲ್ಲಿ ನಿಲ್ಲುವುದೂ ಅಸಾಧ್ಯವಾಗಿದೆ. ಸ್ಥಳೀಯಾಡಳಿತ ಸಮಸ್ಯೆಗೆ ಮುಕ್ತಿ ಕಾಣಿಸುವ ಜವಾಬ್ದಾರಿ ತೋರಬೇಕಾಗಿದೆ.
– ಗಣೇಶ್‌, ವ್ಯಾಪಾರಿ
Advertisement

Udayavani is now on Telegram. Click here to join our channel and stay updated with the latest news.

Next