Advertisement

ಶಾಲಾ ಮಕ್ಕಳ ಚಿತ್ರಕಲೆ ಸ್ಪರ್ಧೆ-ಅಟಲ್‌ ಕಲರ್‌

10:07 AM Jan 09, 2023 | Team Udayavani |

ಬ್ರಹ್ಮಾವರ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಪ್ರಯುಕ್ತ ಉಡುಪಿ ನಗರ ಮತ್ತು ಗ್ರಾಮೀಣ ಬಿಜೆಪಿ ವತಿಯಿಂದ ರವಿವಾರ ಬ್ರಹ್ಮಾವರದ ಶಾಮಿಲಿ ಸಭಾಂಗಣದಲ್ಲಿ ಮಾತೃಸಂಗಮ ಹಾಗೂ ಮಕ್ಕಳಿಗಾಗಿ “ಅಟಲ್‌ ಕಲರ್‌’ ಚಿತ್ರ ಕಲಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯ ವಿವಿಧ ಭಾಗದ ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಮಾಣಪತ್ರ ಪಡೆದರು.

Advertisement

ಬೆಳಗ್ಗೆ 9 ಗಂಟೆಗೆ ಶುರುವಾದ ಚಿತ್ರಕಲಾ ಸ್ಪರ್ಧೆ ಮಧ್ಯಾಹ್ನದ ಅನಂತರವೂ ನಡೆದಿದೆ. ಎಲ್‌ಕೆಜಿ, ಯುಕೆಜಿಯಿಂದ 1ನೇ ತರಗತಿ, 2ರಿಂದ 4ನೇ ತರಗತಿ, 5ರಿಂದ 7ನೇ ತರಗತಿ ಹಾಗೂ 8ರಿಂದ 10ನೇ ತರಗತಿ ವಿದ್ಯಾರ್ಥಿಗಳು ಹೀಗೆ ನಾಲ್ಕು ವಿಭಾಗದಲ್ಲಿ ಚಿತ್ರಕಲೆ ಸ್ಪರ್ಧೆ ನಡೆಯಿತು. ಸ್ಪರ್ಧೆಗೆ ಬೇಕಾದ ಡ್ರಾಯಿಂಗ್‌ ಶೀಟ್‌ ಸ್ಥಳದಲ್ಲೇ ವಿತರಿಸಲಾಯಿತು. ವಿದ್ಯಾರ್ಥಿಗಳು ಉತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡರು.

ಮಕ್ಕಳು ಸ್ಪರ್ಧೆಗೆ ಕರೆದುಕೊಂಡು ಬಂದ ಪಾಲಕ, ಪೋಷಕರು ಸ್ಪರ್ಧೆ ಪೂರ್ಣಗೊಳ್ಳುವ ವರೆಗೂ ಸಭಾಂಗಣದ ಆವರಣದಲ್ಲೇ ಇದ್ದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಶಾಸಕ ರಘುಪತಿ ಭಟ್‌, ನಗರ ಬಿಜೆಪಿ ಅಧ್ಯಕ್ಷ ಮಹೇಶ್‌ ಠಾಕೂರ್‌, ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ಮೀನಾ ನಾಯ್ಕ ಮೊದಲಾದವರು ಸ್ಥಳದಲ್ಲೇ ಇದ್ದು ಮಕ್ಕಳಿಗೆ, ಪಾಲಕ, ಪೋಷಕ ರಿಗೆ ಸಲಹೆ ನೀಡಿದರು. ಉಡುಪಿ ಆರ್ಟಿಸ್ಟ್ಸ್ ಫೋರಂ ಸಹಯೋಗ ದೊಂದಿಗೆ ಸ್ಪರ್ಧೆ ನಡೆಯಿತು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next