Advertisement

ಮಾಜಿ ಪ್ರಧಾನಿ ಅಟಲ್‌ ಚಿತಾಭಸ್ಮ ಇಂದು ಹರಿದ್ವಾರದಲ್ಲಿ ಲೀನ

06:00 AM Aug 19, 2018 | |

ಹೊಸದಿಲ್ಲಿ / ಔರಂಗಾಬಾದ್‌: ಗುರುವಾರ ನಿಧನರಾದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಚಿತಾಭಸ್ಮವನ್ನು ಭಾನುವಾರ ಹರಿದ್ವಾರದಲ್ಲಿ ಗಂಗಾನದಿಯಲ್ಲಿ ವಿಸರ್ಜಿಸಲಾಗುತ್ತದೆ. ಅಷ್ಟೇ ಅಲ್ಲ, ದೇಶದ ವಿವಿಧ ಪುಣ್ಯಸ್ಥಳಗಳಲ್ಲೂ ವಿಸರ್ಜಿಸಲಾಗುತ್ತದೆ. ಭಾನುವಾರ ಹರಿದ್ವಾರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ಉ.ಪ್ರ ಸಿಎಂ ಯೋಗಿ ಆದಿತ್ಯನಾಥ ಹಾಗೂ ಇತರ ಗಣ್ಯರು ಹಾಜರಾಗಲಿದ್ದಾರೆ.

Advertisement

ಪಾಲಿಕೆ ಸದಸ್ಯನ ಬಂಧನ: ಮಾಜಿ ಪ್ರಧಾನಿ ವಾಜಪೇಯಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಹಿಂದೇಟು ಹಾಕಿದ್ದಲ್ಲದೆ, ಸಂಘಟನೆಗಳ ನಡುವೆ ಶತ್ರುತ್ವ ಪ್ರಚೋದಿಸುವಂತೆ ನಡೆದುಕೊಂಡ ಕಾರಣಕ್ಕಾಗಿ ಔರಂಗಾಬಾದ್‌ ಮುನ್ಸಿಪಲ್‌ ಕಾರ್ಪೊರೇಷನ್‌ನ ಸದಸ್ಯ ಸಯ್ಯದ್‌ ಮತೀನ್‌ ಸಯ್ಯದ್‌ ರಶೀದ್‌ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. 

ಶುಕ್ರವಾರ ಪಾಲಿಕೆ ವತಿಯಿಂದ ಸಂತಾಪ ಸಭೆ ಕರೆಯಲಾಗಿತ್ತು. ಆಲ್‌ ಇಂಡಿಯಾ ಮಜಿ ಲಿಸ್‌-ಎ-ಇತ್ತೆ ಹಾ ದುಲ್‌ ಮುಸ್ಲಿ ಮೀನ್‌ (ಎಐಎಂಐಎಂ) ಪಕ್ಷದ ನಾಯಕರೂ ಆಗಿರುವ ರಶೀದ್‌ ಸಹ ಸಭೆಗೆ ಹಾಜರಾಗಿದ್ದರು. ಸಭೆಯಲ್ಲಿ ಪಾಲಿಕೆ ವತಿಯಿಂದ ಶ್ರದ್ಧಾಂಜಲಿಸಲ್ಲಿಸುವ ಠರಾವು ಮಂಡಿಸಲಾಗಿತ್ತು. ಈ ಠರಾವಿಗೆ ವಿರೋಧ ವ್ಯಕ್ತಪಡಿಸಿದ ರಶೀದ್‌, ವಾಜಪೇಯಿ ವಿರುದ್ಧ ಮಾತನಾಡಿದರು. ಆಗ, ಪಾಲಿಕೆಯ ಬಿಜೆಪಿ ಸದಸ್ಯರು ವಿರೋಧಿಸಿದರು. ಇದು ಗಲಾಟೆಗೆ ಕಾರಣವಾಗಿ, ರಶೀದ್‌ ಮೇಲೆ ಬಿಜೆಪಿ ಸದಸ್ಯರಿಂದ ಹಲ್ಲೆಯೂ ನಡೆದಿತ್ತು. ಹೀಗಾಗಿ, ಪೊಲೀಸರು ಇದೀಗ ರಶೀದ್‌ ಹಾಗೂ ಹಲ್ಲೆ ನಡೆಸಿದ ಬಿಜೆಪಿಯ ಸದಸ್ಯರನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next