Advertisement

ಅಟಲ್‌ಬಿಹಾರಿ ವಾಜಪೇಯಿ ಆದರ್ಶಗಳನ್ನು ಪಾಲಿಸಿ: ಸಿದ್ದು ಸವದಿ

07:13 PM Dec 25, 2021 | Team Udayavani |

ರಬಕವಿ-ಬನಹಟ್ಟಿ : ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ದೇಶ ಕಂಡ ಅಪ್ರತಿಮ ನಾಯಕ ಮತ್ತು ಭಾರತ ದೇಶದ ಅಭಿವೃದ್ಧಿಯ ಹರಿಕಾರರು ಎಂದು ಕೆಎಚ್‌ಡಿಸಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿದ್ದು ಸವದಿ ಹೇಳಿದರು.

Advertisement

ಶನಿವಾರ ಬನಹಟ್ಟಿ ನಗರದ ತೇರದಾಳ ಮತಕ್ಷೇತ್ರದ ಬಿಜೆಪಿ ಕಾರ್ಯಾಲಯದಲ್ಲಿ ವಾಜಪೇಯಿ ಜನ್ಮದಿನಾಚರಣೆ ನಿಮಿತ್ತ ನಡೆದ ಸಮಾರಂಭದಲ್ಲಿ ವಾಜಪೇಯಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಮಾತನಾಡಿ, ಪ್ರಮಾಣಿಕವಾಗಿ ಪಕ್ಷ ಸಂಘಟನೆ ಮಾಡುವುದು ಕೂಡಾ ನಮ್ಮ ರಾಷ್ಟ್ರದ ಅಳಿಲು ಸೇವೆ ಮಾಡಿದಂತೆ. ಪಕ್ಷದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಂಡು. ಪಕ್ಷದ ಬೆಳವಣಿಗೆಗೆ ಕೆಲಸ ಮಾಡಿ. ಹಿರಿಯರ ಆದರ್ಶಗಳನ್ನು ಪಾಲಿಸಿ, ಅವರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆಯಿರಿ. ಪಕ್ಷ ಸಂಘಟನೆಗೆ ತಾವೇಲ್ಲರೂ ಕಂಕಣ ಬದ್ದರಾಗಿರಿ ಎಂದರು.

ಇಂದಿನ ಬಿಜೆಪಿ ಕಾರ್ಯಕರ್ತರಿಗೆ ವಾಜಪೇಯಿ ಅವರ ತತ್ವ, ಆದರ್ಶಗಳು ಮಾದರಿಯಾಗಬೇಕು. ರಸ್ತೆಗಳ ಅಭಿವೃದ್ಧಿಯಿಂದ ದೇಶದ ಪ್ರಗತಿ ಸಾಧ್ಯ ಎಂಬುದನ್ನು ತಿಳಿದುಕೊಂಡು ದೇಶದ ರಸ್ತೆಗಳನ್ನು ಅಭಿವೃದ್ಧಿಗೊಳಿಸಿದ ಕೀರ್ತಿ ಶ್ರೇಯಸ್ಸು ವಾಜಪೇಯಿ ಅವರದು. ಅದೇ ರೀತಿಯಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದರು ಎಂದು ಸವದಿ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಓಬಿಸಿ ಮೋರ್ಚಾ ಕಾರ್ಯದರ್ಶಿ ಶಿವಾನಂದ ಗಾಯಕವಾಡ ಮತ್ತು ಬೆಳಗಾವಿ ವಿಭಾಗದ ವಕ್ತಾರ ಬಸವರಾಜ ಯಂಕಂಚಿ ಮಾತನಾಡಿದರು.

ನಗರ ಬಿಜೆಪಿ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಜಿಲ್ಲಾ ಉಪಾಧ್ಯಕ್ಷ ರಾಜು ಅಂಬಲಿ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ಹೊಸೂರ, ವೈಷ್ಣವಿ ಬಾಗೇವಾಡಿ, ಪವಿತ್ರಾ ತುಕ್ಕಣ್ಣವರ, ಬಸವರಾಜ ತೆಗ್ಗಿ, ಗೌರಿ ಮಿಳ್ಳಿ, ಸುನೀತಾ ನಂದಗೊಂಡ, ಪ್ರಭು ಪೂಜಾರಿ, ಅರುಣ ಬುದ್ನಿ, ಪಿ.ಜಿ. ಕಾಖಂಡಕಿ, ಯಲ್ಲಪ್ಪ ಕಟಗಿ ಸೇರಿದಂತೆ ಅನೇಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next