Advertisement

ಯೋಗಿ ರ್ಯಾಲಿಯಲ್ಲಿ ಬುರ್ಖಾ ತೆಗೆಸಿದರು!

06:35 AM Nov 23, 2017 | Harsha Rao |

ಬಾಲಿಯಾ:  ಮಂಗಳವಾರ ಇಲ್ಲಿ ಆಯೋಜಿಸಲಾಗಿದ್ದ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರ ರ್ಯಾಲಿಯಲ್ಲಿ ಪೊಲೀಸರು ಒತ್ತಾಯಪೂರ್ವಕವಾಗಿ ಮುಸ್ಲಿಂ ಮಹಿಳೆಯೊಬ್ಬರ ಬುರ್ಖಾ ತೆಗೆಸಿದ ಘಟನೆ ನಡೆದಿದೆ. ಇದು ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಚಾರ ರ್ಯಾಲಿ ಉದ್ದೇಶಿಸಿ ಯೋಗಿ ಮಾತನಾ ಡುವುದಿತ್ತು. ಅವರು ಆಗಮಿಸುವ ಮುಂಚೆ ಮಹಿಳಾ ಪೇದೆಗಳು ರ್ಯಾಲಿಯಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬರ ಬುರ್ಖಾವನ್ನು ತೆಗೆಸಿದ್ದು, ಅದರ ವೀಡಿಯೋ ವೈರಲ್‌ ಆಗಿತ್ತು. ಆ ಮಹಿಳೆ ಬಿಜೆಪಿ ಕಾರ್ಯಕರ್ತೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next