Advertisement

ಹಿ.ಪ್ರದೇಶ: ಮೇಘ ಸ್ಫೋಟ, ಭೂಕುಸಿತ: 46 ಮಂದಿ ಸಾವು

06:00 AM Aug 14, 2017 | Team Udayavani |

ಶಿಮ್ಲಾ: ಭಾರೀ ಮೇಘ ಸ್ಫೋಟ ಮತ್ತು ಭೂಕುಸಿತದ ಅಬ್ಬರಕ್ಕೆ ಹಿಮಾಚಲ ಪ್ರದೇಶದಲ್ಲಿ ಎರಡು ಬಸ್ಸುಗಳು ಸೇರಿದಂತೆ ಹಲವು ವಾಹನಗಳು ಭೂಸಮಾಧಿಯಾಗಿದ್ದು, 46 ಮಂದಿ ಮೃತಪಟ್ಟ ಘಟನೆ ಶನಿವಾರ ತಡರಾತ್ರಿ ನಡೆದಿದೆ.

Advertisement

ಮಂಡಿ-ಪಠಾಣ್‌ಕೋಟ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಇನ್ನೂ 32 ಮಂದಿ ನಾಪತ್ತೆಯಾಗಿದ್ದು, ಅವರೂ ಬದುಕಿರುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾತ್ರಿ 1.15ರ ವೇಳೆಗೆ ಬಸ್‌ಗಳು ಟೀ ಬ್ರೇಕ್‌ಗೆಂದು ನಿಲ್ಲಿಸಿದ್ದಾಗ, ಭಾರೀ ಮಳೆಯೊಂದಿಗೆ ಭೂಕುಸಿತವೂ ಸಂಭವಿಸಿದ್ದು, ವಾಹನಗಳು  ಸುಮಾರು 800 ಮೀ. ದೂರದವೆರೆಗೆ ಕೊಚ್ಚಿಕೊಂಡು ಹೋಗಿ, ಮಣ್ಣಿನಲ್ಲಿ ಹೂತುಹೋಗಿವೆ. 8 ಮಂದಿಯ ಮೃತದೇಹ ಗಳನ್ನು ಹೊರತೆಗೆಯಲಾಗಿದ್ದು, ಉಳಿದ 32 ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ಘಟನೆಯ ತೀವ್ರತೆ ಎಷ್ಟಿತ್ತೆಂದರೆ, ಬಸ್ಸೂ ಸೇರಿ ದಂತೆ ವಾಹನಗಳು ನೆಲದಲ್ಲಿ ಸಂಪೂರ್ಣ ವಾಗಿ ಹೂತುಹೋಗಿದ್ದು, ಅವುಗಳ ಅವಶೇಷ ಕೂಡ ಪೂರ್ಣವಾಗಿ ಕಾಣಸಿಗುತ್ತಿಲ್ಲ.

5 ಲಕ್ಷ ರೂ. ಪರಿಹಾರ: ಹಿಮಾಚಲ ಪ್ರದೇಶ ಸಿಎಂ ವೀರಭದ್ರ ಸಿಂಗ್‌ ಅವರು ಭಾನುವಾರ ಘಟನಾ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಜತೆಗೆ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಇದೇ ವೇಳೆ, ಪ್ರಧಾನಿ ಮೋದಿ ಅವರೂ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.

ಈ ಹಿಂದಿನ ಘಟನೆಗಳು
45 ಮಂದಿ ಸಾವು: 1988- ಶಿಮ್ಲಾ ಜಿಲ್ಲೆಯ ಮತಿಯಾ ನಾದಲ್ಲಿ ಭೂಕುಸಿತ ದಿಂದ ನೆಲಸಮಾಧಿ ಯಾದ ಬಸ್‌
42 ಮಂದಿ ಸಾವು: 1994- ಕುಲ್ಲು ಜಿಲ್ಲೆ ಯಲ್ಲಿ ಇಂಥದ್ದೇ ಮತ್ತೂಂದು ದುರಂತ ದಲ್ಲಿ ಪ್ರಯಾಣಿಕರ ಸಾವು

Advertisement

Udayavani is now on Telegram. Click here to join our channel and stay updated with the latest news.

Next