Advertisement

ಉ.ಪ್ರ.ದಲ್ಲಿ ಧೂಳಿನ ಬಿರುಗಾಳಿ, ಸಿಡಿಲು: 13 ಬಲಿ, 21 ಮಂದಿಗೆ ಗಾಯ

10:18 AM Jun 08, 2019 | Team Udayavani |

ಲಕ್ನೋ : ಉತ್ತರ ಪ್ರದೇಶದ ಅನೇಕ ಭಾಗಗಳಲ್ಲಿ ಕಾಣಿಸಿಕೊಂಡ ಧೂಳಿನ ಬಿರುಗಾಳಿ ಮತ್ತು ಸಿಡಿಲಿಗೆ ಕನಿಷ್ಠ 13 ಮಂದಿ ಮೃತಪಟ್ಟಿದ್ದು 21 ಮಂದಿ ಗಾಯಗೊಂಡಿದ್ದಾರೆ.

Advertisement

ಮೈನ್‌ಪುರಿಯಲ್ಲಿ ಆರು ಮಂದಿ, ಇಟಾ ಮತ್ತು ಕಸ್‌ಗಂಜ್‌ ನಲ್ಲಿ ತಲೂ ಮೂರು ಮಂದಿ ಧೂಳಿಯ ಬಿರುಗಾಳಿಗೆ ಮತ್ತು ಮೊರಾದಾಬಾದ್‌ ನಲ್ಲಿ ಸಿಡಿಲಾಘಾತಕ್ಕೆ ಓರ್ವ ಮೃತಪಟ್ಟಿರುವುದಾಗಿ ವರದಿಯಾಗಿದೆ.

ನಿನ್ನೆ ಗುರುವಾರ ತಡ ಸಂಜೆ ಉತ್ತರ ಪ್ರದೇಶದ ಅನೇಕ ಕಡೆಗಳಲ್ಲಿ ಧೂಳಿನ ಬಿರುಗಾಳಿ ಕಾಣಿಸಿಕೊಂಡು ಅನೇಕ ಮರಗಳು, ಗೋಡೆಗಳು ಧಾರಾಶಾಯಿಯಾದವು.

ಮೈನ್‌ಪುರಿಯಲ್ಲಿ ಕನಿಷ್ಠ 20 ಮಂದಿ ಮತ್ತು ಬದಾವೂಂ ನಲ್ಲಿ ಓರ್ವ ವ್ಯಕ್ತಿ ಗಾಯಗೊಂಡರು. ಸಂತ್ರಸ್ತರಿಗೆ ಕ್ಷಿಪ್ರ ಪರಿಹಾರ, ನೆರವು ನೀಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next