Advertisement

ಯಾಸ್ ನಿಂದ ಅಂದಾಜು ಒಂದು ಕೋಟಿ ಮಂದಿ ಸಂಕಷ್ಟಕ್ಕೀಡಾಗಿದ್ದಾರೆ : ದೀದಿ

05:11 PM May 26, 2021 | Team Udayavani |

ಕೋಲ್ಕತ್ತಾ : ಯಾಸ್ ಚಂಡ ಮಾರುತದ ಕಾರಣದಿಂದಾಗಿ ಪಶ್ಚಿಮ ಬಂಗಾಳದ ಸುಮಾರು ಒಂದು ಕೋಟಿ ಮಂದಿ ಸಂಕಷ್ಟಕ್ಕೊಳಗಾಗಿದ್ದಾರೆ, ಅಂದಾಜು ಮೂರು ಲಕ್ಷ ಮನೆಗಳು ಹಾನಿಯಾಗಿವೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Advertisement

ಈ ಬಗ್ಗೆ ಪ್ರತಿಕ್ರಿಯಿಸಿದ ಬ್ಯಾನರ್ಜಿ,  ಚಂಡಮಾರುತದ ಉಲ್ಬಣದಿಂದ ಸಮುದ್ರಗಳಲ್ಲಿ ಹೆಚ್ಚಿನ ಉಬ್ಬರವಿಳಿತವು ಕೆಲವು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ ಎಂದು ತೀರ ವಾಸಿಗಳಿಗೆ ಎಚ್ಚರಿಕೆ  ನೀಡಿದ್ದಾರೆ.

ಇದನ್ನೂ ಓದಿ : ಅತ್ಯಾಚಾರ ಎಸಗಿ, ಕೊಲೆ ಮಾಡಿದ ಪ್ರಕರಣ: ತಪ್ಪಿತಸ್ಥರ ವಿರುದ್ಧಕ್ರಮಕ್ಕೆ ಪ್ರಕಾಶ ರಾಠೋಡ ಆಗ್ರಹ

15,04,506 ಕಡಲಿ ತೀರವಾಸಿಗಳನ್ನು ಅಪಾಯದ ವಲಯದಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈ ನಡುವೆಯೂ ಮೀನುಗಾರಿಕೆಗೆ ತೆರಳಿದ್ದ ಒಬ್ಬರು ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ. ಬಂಗಾಳವು ಯಾಸ್ ನಿಂದ “ಹೆಚ್ಚು ಪೀಡಿತ ರಾಜ್ಯ”ವಾಗಿದೆ  ಎಂದಿದ್ದಾರೆ.

ಇನ್ನು, ನಾನು ಶೀಘ್ರದಲ್ಲೇ ಪುರ್ಬಾ, ಮೆದಿನಿಪುರ, ದಕ್ಷಿಣ 24 ಪರಗಣ ಮತ್ತು ಉತ್ತರ 24 ಪರಗಣ ಜಿಲ್ಲೆಗಳಲ್ಲಿ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ಕೈಗೊಳ್ಳಲಿದ್ದೇನೆ” ಎಂದು ಅವರು ಹೇಳಿದ್ದಾರೆ.

Advertisement

ಯಾಸ್ ಚಂಡಮಾರುತವು ಇಂದು (ಬುಧವಾರ, ಮೇ 26) ಬೆಳಿಗ್ಗೆ 130-140 ಕಿ.ಮೀ ವೇಗದಲ್ಲಿ ಒಡಿಶಾದ ಧಮ್ರಾ ಬಂದರಿನ ಬಳಿ 155 ಕಿ.ಮೀ ವೇಗದಲ್ಲಿ ಭೂಕುಸಿತ ಉಂಟಾಗಿದೆ ಎಂದು ಡಾಸ್ಪ್ಲರ್ ರಾಡಾರ್ ಅಂಕಿಅಂಶ ತಿಳಿಸಿದೆ.

ಇದನ್ನೂ ಓದಿ : ಟಾಸ್ಕ್ ಪೋರ್ಸ್ ಸಮಿತಿಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಪರ ಜಿಲ್ಲಾಧಿಕಾರಿ ಪರಿಶೀಲನೆ

Advertisement

Udayavani is now on Telegram. Click here to join our channel and stay updated with the latest news.

Next