Advertisement

ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

07:22 AM Mar 03, 2022 | Team Udayavani |

ಮೇಷ:

Advertisement

ಸರಕಾರ, ರಾಜಕೀಯ ಕಾರ್ಯದಲ್ಲಿ ಪ್ರಗತಿ. ಸಮುದ್ರ ಜನ್ಯ ಪದಾರ್ಥಗಳಿಂದಲೂ, ವಾಹನ, ಭೂಮಿ ಪಾಲುದಾರಿಕೆ ವಿಚಾರದಲ್ಲಿ ಲಾಭ. ಮಿತ್ರರಿಂದ ಸಹಾಯ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫ‌ಲ ಪ್ರಾಪ್ತಿ. ದೇವತಾ ಕಾರ್ಯದಿಂದ ಶುಭ.

ವೃಷಭ:

ಆರೋಗ್ಯದಲ್ಲಿ ಗಮನ ಹರಿಸಿ. ಸಂದರ್ಭಕ್ಕೆ ಸರಿಯಾಗಿ ವಿವೇಕ, ವಾಕ್‌ಚತುರತೆಯಿಂದ, ಸ್ತ್ರೀಯರಿಂದ ಪಾಲುದಾರಿಕೆ, ಉದ್ಯೋಗ, ಜನಪದ, ಸಾಮಾಜಿಕ ವಿಚಾರದಲ್ಲಿ ನಿರೀಕ್ಷಿತ ಫ‌ಲಿತಾಂಶ. ಧಾರ್ಮಿಕ ಕಾರ್ಯದಿಂದ ಸುಖ ತೃಪ್ತಿ.

ಮಿಥುನ:

Advertisement

ಉತ್ತಮ ಆರೋಗ್ಯ. ಮಕ್ಕಳ ವಿಚಾರದಲ್ಲಿ ಆತುರತೆ ಸಲ್ಲದು. ಸ್ತ್ರೀಪುರುಷರಿಂದ ಪರಸ್ಪರ ಸಹಾಯ. ಅನ್ಯರ ಜವಾಬ್ದಾರಿ ವಿಚಾರದಲ್ಲಿ ಗಮನಹರಿಸುವಾಗ ಎಚ್ಚರಿಕೆ. ಕಠೊರ, ದಾಕ್ಷಿಣ್ಯ ಗುಣಗಳ ಕಾರ್ಯ ವೈಖರಿ ಸಲ್ಲದು.

ಕಟಕ:

ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಶ್ರದ್ಧೆ, ಭಕ್ತಿಗೆ ಗಮನವಿರಲಿ. ಭೂಮಿ ಕಟ್ಟಡಗಳಿಂದ ಅನುಕೂಲ. ಮಿತ್ರರಿಂದ ಸಹಾಯ. ಪಾಲುದಾರಿಕಾ ವ್ಯವಹಾರದಲ್ಲಿ ಘರ್ಷಣೆಗೆ ಅವಕಾಶ ನೀಡದೆ ಎಚ್ಚರಿಕೆಯ ನಡೆ ಅಗತ್ಯ.

ಸಿಂಹ:

ದೀರ್ಘ‌ ಪ್ರಯಾಣ. ಪರದೇಶದ ವಿಚಾರದಲ್ಲಿ ಮಾನಸಿಕ ಒತ್ತಡ ಕಿರಿಕಿರಿಗಳಿದ್ದರೂ ಸುಖದಾಯಕ ಫ‌ಲಿತಾಂಶ ಲಭಿಸುವುದು. ವಿದ್ಯಾರ್ಥಿಗಳಿಗೆ ಅನುಕೂಲಕರ ಸಮಯ. ಧನಾರ್ಜನೆಗೆ ಉತ್ತಮ ದಿನ.

ಕನ್ಯಾ:

ಉತ್ತಮ ಧನ ಲಾಭ. ಉದ್ಯೋಗದಲ್ಲಿ ಪ್ರಗತಿ. ಮನೋರಂಜನೆಯಲ್ಲಿ ಆಸಕ್ತಿ. ಧಾರ್ಮಿಕ ಕೆಲಸ ಕಾರ್ಯಗಳಿಗೆ, ಗೃಹೋಪಕರಣ ವಸ್ತುಗಳಿಗೆ ಧನ ವ್ಯಯ. ಮಾತಿನಲ್ಲಿ ಗೊಂದಲಕ್ಕೆ ಅವಕಾಶ ನೀಡದಿರಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ.

ತುಲಾ:
ಮಾತೃ ಸಮಾನರಿಂದ ಲಾಭ. ನೂತನ ಅವಕಾಶ. ವಿದ್ಯಾರ್ಥಿಗಳಿಗೆ, ಉದ್ಯೋಗಸ್ಥರಿಗೆ, ವ್ಯವಹಾರಸ್ಥರಿಗೆ, ಮಿತ್ರರ ಸಹಾಯ ಒದಗುವ ಸಮಯ. ಪರಿಶ್ರಮಕ್ಕೆ ಸರಿಯಾಗಿ ಸ್ಥಾನಮಾನ ಗೌರವ. ಧನಾರ್ಜನೆಗೆ ಯೋಗ್ಯ ದಿನ.
ವೃಶ್ಚಿಕ:
ಧಾರ್ಮಿಕ ಕಾರ್ಯಗಳಿಗೆ ಧನ ವ್ಯಯದಿಂದ ಸಫ‌ಲತೆ. ಸ್ಥಾನ ಮಾನ ಆರೋಗ್ಯ ವೃದ್ಧಿ. ಉತ್ತಮ ಜನರ ಒಡನಾಟದಿಂದ ಸಂತೋಷ. ದಾಂಪತ್ಯ ಸುಖದಲ್ಲಿ ವೃದ್ಧಿ. ಹಿರಿಯರ ಆರೋಗ್ಯ ಗಮನಿಸಿ.
ಧನು:
ಉತ್ತಮ ಧನಾರ್ಜನೆ ಇದ್ದರೂ ಲಾಭಕ್ಕೆ ಕೊರತೆ ಆಗದಂತೆ ಎಚ್ಚರ ವಹಿಸಿ. ಸಣ್ಣ ಪ್ರಯಾಣಕ್ಕೆ ಧನ ವ್ಯಯ. ಗುರುಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ. ದೇವತಾ ಸ್ಥಳ ಸಂದರ್ಶನದಿಂದ ಮಾನಸಿಕ ತೃಪ್ತಿ.
ಮಕರ:
ದೈಹಿಕ ಮಾನಸಿಕ ಆರೋಗ್ಯದ ಬಗ್ಗೆ ಒತ್ತು ನೀಡಿ. ಉದ್ಯೋಗ ವ್ಯವಹಾರದಲ್ಲಿ ಸೂಕ್ಷ್ಮತೆ ವಹಿಸುವುದರಿಂದ ನಿರೀಕ್ಷಿತ ಫ‌ಲಿತಾಂಶ. ಬಂಧುಮಿತ್ರರೊಂದಿಗೆ ವೈಮನಸ್ಸಿಗೆ ಅವಕಾಶ ನೀಡದಿರಿ. ಆಳವಾದ ಅಧ್ಯಯನ ನಡೆಸುವವರಿಗೆ ಉತ್ತಮ ದಿನ.
ಕುಂಭ:
ದೂರ ಪ್ರಯಾಣದಲ್ಲಿ ಅಡಚಣೆ ತೋರೀತು. ಗುರು ಹಿರಿಯರ ಆರೋಗ್ಯದ ಕಡೆಗೆ ಗಮನಹರಿಸಿ. ಉದ್ಯೋಗ ವ್ಯವಹಾರದಲ್ಲಿ ಉತ್ತಮ ಬದಲಾವಣೆಯಿಂದ ಮಾನಸಿಕ ಸಂತೋಷ. ಧಾರ್ಮಿಕ ವಿಚಾರದಲ್ಲಿ ಹೆಚ್ಚಿನ ಭಕ್ತಿ ಶ್ರದ್ಧೆಗೆ ಆದ್ಯತೆ ನೀಡಿ ಸಫ‌ಲರಾಗಿರಿ.
ಮೀನ:
ಆರೋಗ್ಯ ಕಡೆಗೆ ಗಮನಹರಿಸಬೇಕು. ಬಂಧುಮಿತ್ರರೊಂದಿಗೆ ಸಮಯ ಕಳೆಯುವುದರೊಂದಿಗೆ ಮಾನಸಿಕ ಸ್ಥೈರ್ಯ ವೃದ್ಧಿ. ಆರ್ಥಿಕ ವಿಚಾರದಲ್ಲಿ ಘರ್ಷಣೆ ಮೋಸ ಹೋಗದಂತೆ ಎಚ್ಚರ ವಹಿಸಿ. ಯಾವುದೇ ಆತುರದ ನಿರ್ಧಾರ ಕೈಗೊಳ್ಳದಿರಿ. ಸರಿಯಾದ ಪತ್ರ ವ್ಯವಹಾರವಿರಲಿ.
Advertisement

Udayavani is now on Telegram. Click here to join our channel and stay updated with the latest news.

Next