Advertisement

ಅತ್ಯಾಚಾರ ಆರೋಪದಡಿ ಜ್ಯೋತಿಷಿ ಬಂಧನ

12:17 PM Apr 22, 2018 | |

ಬೆಂಗಳೂರು: ಜ್ಯೋತಿಷ್ಯ ಹೇಳಿಕೊಡುವುದಾಗಿ ನಂಬಿಸಿ ಯುವತಿಯಿಂದ ಹಣ ಪಡೆದು ಅತ್ಯಾಚಾರವೆಸಗಿದ ಆರೋಪದ ಮೇಲೆ ಗಂಗಮ್ಮಗುಡಿ ಪೊಲೀಸರು ಜ್ಯೋತಿಷಿಯೊಬ್ಬನನ್ನು ಬಂಧಿಸಿದ್ದಾರೆ.

Advertisement

ಅಬ್ಬಿಗೆರೆ ನಿವಾಸಿ ನಕ್ಷತ್ರನಾಡಿ ಖ್ಯಾತಿಯ ಜ್ಯೋತಿಷಿ ದಿನೇಶ್‌ (40) ಬಂಧಿತ. ಮಾಗಡಿ ರಸ್ತೆಯಲ್ಲಿನ ಬಡಾವಣೆಯೊಂದರಲ್ಲಿ ವಾಸವಿರುವ ಯುವತಿ ಮೇಲೆ ದೌರ್ಜನ್ಯವೆಸಗಿರುವ ಆರೋಪದ ಮೇಲೆ ಜ್ಯೋತಿಷಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಕಳೆದ ವರ್ಷ ಏಪ್ರಿಲ್‌ನಲ್ಲಿ ದಿನೇಶ್‌ನನ್ನು ಭೇಟಿಯಾದಾಗ ಜ್ಯೋತಿಷ್ಯ ತರಬೇತಿಗೆ ಸಂಬಂಧಿಸಿದಂತೆ ಮುಂಗಡ ಹಣ ಹಾಗೂ ತರಗತಿಗೆ ಇಂತಿಷ್ಟು ಹಣ ನೀಡುವಂತೆ ದಿನೇಶ್‌ ತಿಳಿಸಿದ್ದ. ಅದರಂತೆ ಪ್ರತಿ ತಿಂಗಳು ಹಣ ಕೊಡುತ್ತಿದ್ದೆ. ಈ ಮಧ್ಯೆ ಕೆಲ ತಿಂಗಳ ಬಳಿಕ ತುರ್ತು ಹಣದ ಅಗತ್ಯವಿದೆ ಎಂದು ದಿನೇಶ್‌ ನನ್ನ ಬಳಿ 50 ಲಕ್ಷ ರೂ. ಸಾಲ ಪಡೆದಿದ್ದ.

ಜತೆಗೆ ಜ್ಯೋತಿಷ್ಯ ಹೇಳಿ ಕೊಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಆತನ ಪತ್ನಿ ಮನೆಯಲ್ಲಿ ಇಲ್ಲದ ವೇಳೆ ನನ್ನನ್ನು ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ. ಇದೇ ರೀತಿ ಹಲವು ಮಂದಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ,’ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next