Advertisement

ಶನಿವಾರದ ರಾಶಿಫಲ, ಇಲ್ಲಿದೆ ನಿಮ್ಮ ಗ್ರಹಬಲ

07:45 AM Dec 25, 2021 | Team Udayavani |

ಮೇಷ:

Advertisement

ಆರೋಗ್ಯ ವೃದ್ಧಿ. ನಿಮ್ಮಲ್ಲಿರುವ ವಿದ್ಯೆಯನ್ನು ದೈರ್ಯದಿಂದ ಸರಿಯಾಗಿ ಉಪಯೋಗಿಸಿ. ಸಭಾಕಂಪನವಿಲ್ಲದೆ ಸಂತೋಷ ದಿಂದ ನೇರ ಮಾತನಾಡಿ ಕಾರ್ಯ ಸಾಧಿಸಿಕೊಳ್ಳಿ. ಪತ್ರ ವ್ಯವಹಾರಕ್ಕೆ ಮನ್ನಣೆ. ಮಿತ್ರರು, ಹಿರಿಯರು, ಮಕ್ಕಳಿಂದ ಸುವಾರ್ತೆ.

ವೃಷಭ:

ಬಂಧು ಮಿತ್ರರು ಸಹೋದರ ಸಮಾನರಲ್ಲಿ ಘರ್ಷಣೆಗೆ ಅವಕಾಶ ನೀಡದಿರಿ. ಭೂಮಿ, ವಾಹನಾದಿ ವಿಚಾರದಲ್ಲಿ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿದಾಯಕ ಬದಲಾವಣೆ. ಆರ್ಥಿಕ ಅನುಕೂಲತೆ. ಕಣ್ಣು, ಉದರ ಕಫ‌ ತೊಂದರೆ ಆಗದಂತೆ ಕಾಳಜಿ ವಹಿಸಿ.

ಮಿಥುನ:

Advertisement

ಧನಾಗಮ ಉತ್ತಮವಿದ್ದರೂ ಖರ್ಚಿನ ಹಿಡಿತವಿರಲಿ. ವಿದ್ಯಾರ್ಥಿಗಳಿಗೆ ಫ‌ಲಿತಾಂಶ ಸಿಗುವ ಸಮಯ. ದೂರದ ಕಾರ್ಯಕ್ಷೇತ್ರದಲ್ಲಿ ಪಾಲುದಾರಿಕಾ ವ್ಯವಹಾರಗಳಲ್ಲಿ ಸಂಯಮವಿದ್ದರೆ ಸಂತೋಷಕ್ಕೆ ನೆಮ್ಮದಿಗೆ ಕೊರತೆ ಕಾಣದು.

ಕಟಕ:

ಪಾಲುದಾರಿಕಾ ಬಂಧುಮಿತ್ರರ ಕೈಗೊಂಡ ಚಟುವಟಿಕೆಗಳಲ್ಲಿ ಮಾನಸಿಕ ಗೊಂದಲ ವಾದವಿವಾದಗಳಿದ್ದರೂ ಅಂತಿಮವಾಗಿ ಜಯ ನಿಮ್ಮದಾಗುವುದು. ಅನುಯಾಯಿಗಳ, ಶಿಷ್ಯರ, ಮಕ್ಕಳ ವಿಚಾರದಲ್ಲಿ ಗಮನಹರಿಸಿ

ಸಿಂಹ:

ಮಿತ್ರರೊಂದಿಗೆ ಗುರುಗಳೊಂದಿಗೂ ವ್ಯವಹರಿಸುವಾಗ ಎಚ್ಚರವಿರಲಿ. ಅನ್ಯರಿಗೆ ಸಹಾಯ ಮಾಡಲು ಹೋಗಿ ತೊಂದರೆಗೆ ಒಳಗಾಗದಿರಿ. ಆರೋಗ್ಯದ ಬಗ್ಗೆ ಗಮನ ಹರಿಸಿ. ದೂರದಿಂದ ಬಂದ ಅವಕಾಶವನ್ನು ಸ್ವೀಕರಿಸಿ.

ಕನ್ಯಾ:

ಧನಾಗಮ ಉತ್ತಮವಿದ್ದರೂ ಖರ್ಚಿನ ಹಿಡಿತವಿರಲಿ. ಪರರನ್ನು ತೃಪ್ತಿಪಡಿಸಲು ಹೋಗಿ ಕಷ್ಟಕ್ಕೆ ಸಿಲುಕದಿರಿ. ಮನೋರಂಜನೆ, ಆಹಾರ ಸೇವನೆಯಲ್ಲಿ ಎಚ್ಚರವಿರಲಿ. ಉದ್ಯೋಗದಲ್ಲಿ ಅಧಿಕ ಶ್ರಮ. ದಾಕ್ಷಿಣ್ಯ ಪ್ರವೃತ್ತಿಯ ವ್ಯವಹಾರಕ್ಕೆ ಅವಕಾಶ ಕೊಡದಿರಿ.

ತುಲಾ:

ನಿರೀಕ್ಷಿತ ಕೆಲಸಕಾರ್ಯಗಳಲ್ಲಿ ಜಯ. ವಿಪುಲ ಅವಕಾಶ. ಉತ್ಪ್ರೇಕ್ಷೆ ಪಡದಿರಿ. ಎಲ್ಲಾ ವಿಧದಲ್ಲಿ ಸುಖ ಸಂತೋಷ ವೃದ್ಧಿ. ಅನ್ಯರ ಮನಸ್ಸನ್ನು ನೋಯಿಸದಿರಿ. ದಾರ್ಮಿಕ ಕ್ಷೇತ್ರ ದರ್ಶನ. ಆಹಾರ ಸೇವನೆಯಲ್ಲಿ ಎಚ್ಚರ. ಆರೋಗ್ಯ ವೃದ್ಧಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ.

ವೃಶ್ಚಿಕ:

ಸರ್ವರೀತಿಯಲ್ಲೂ ಸಂತೋಷ. ಉತ್ಸಾಹದಿಂದ ಸಂಭ್ರಮಿಸುವ ದಿನ. ಗುರುಹಿರಿಯರ ಆಶೀರ್ವಾದ ಲಭಿಸುವ ಅವಕಾಶ. ಸತ್ಸಂಗ ಧಾರ್ಮಿಕ ವಿಚಾರದಲ್ಲಿ ಆಸಕ್ತಿ. ನಿರಂತರ ಚಟುವಟಿಕೆಯಿಂದ ಕೂಡಿದ ದಿನ. ಜನಮನ್ನಣೆ.

ಧನು:

ಆರೋಗ್ಯದಲ್ಲಿ ಸುಧಾರಣೆ. ಉದ್ಯೋಗ ವ್ಯವಹಾರದಲ್ಲಿ ಪ್ರಗತಿ. ಅನಿರೀಕ್ಷಿತ ಧನಾಗಮ. ಸಿಬ್ಬಂದಿವರ್ಗದವರಿಗೆ, ಕಾರ್ಮಿಕ ವರ್ಗದವರಿಗೂ ಸಹಾಯ ಮಾಡಿದ ತೃಪ್ತಿ. ಗೃಹೋಪಕರಣ ವಸ್ತು ಸಂಗ್ರಹಕ್ಕಾಗಿ ಆರ್ಥಿಕ ವ್ಯಯ.

ಮಕರ:

ಉದ್ಯೋಗ, ಗೃಹ, ಭೂ ವಾಹನಾದಿ ವಿಚಾರದಲ್ಲಿ ಬದಲಾವಣೆಗೆ ಉತ್ತಮ ಅವಕಾಶ. ಪಾಲುದಾರಿಕಾ ವ್ಯವಹಾರದಲ್ಲಿ ದಾಕ್ಷಿಣ್ಯ ಮಾಡದಿರಿ. ಮಾತಿನಲ್ಲಿ ಎಚ್ಚರಿಕೆ ಇರಲಿ. ಉನ್ನತ ಅಧ್ಯಯನಕ್ಕೆ ಒತ್ತು ನೀಡುವುದರಿಂದ ಮಾನಸಿಕ ತೃಪ್ತಿ.

ಕುಂಭ:

ಆರೋಗ್ಯ ವೃದ್ಧಿ. ದೇವತಾಸ್ಥಳ ಸಂದರ್ಶನ. ದೀರ್ಘ‌ ಪ್ರಯಾಣದಿಂದ ಲಾಭ. ಗುರುಹಿರಿಯರ ಮಿತ್ರರ ಭೇಟಿ. ಗೃಹೋಪಕರಣ ವಸ್ತುಗಳಿಗೆ ಧನ ವ್ಯಯ. ಕಾರ್ಯ ಕ್ಷೇತ್ರದಲ್ಲಿ ನಿರೀಕ್ಷೆಗೆ ತಕ್ಕಂತೆ ಸಹಾಯ ಲಭಿಸದು. ವಿದ್ಯಾಥಿಗಳಿಗೆ ಅನುಕೂಲ.

ಮೀನ:

ಉತ್ತಮ ಆಲೋಚನೆಯಿಂದ ಕೂಡಿದ ಕಾರ್ಯ ವೈಖರಿ ಪ್ರಗತಿದಾಯಕ. ಧಾರ್ಮಿಕ ವಿಚಾರಕ್ಕಾಗಿ ಧನವ್ಯಯ. ಆರೋಗ್ಯದಲ್ಲಿ ಸುಧಾರಣೆ. ನಿರೀಕ್ಷಿತ ಸ್ಥಾನ ಪ್ರಾಪ್ತಿ. ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ. ಆಭರಣ ಸಂಗ್ರಹದಲ್ಲಿ ಆಸಕ್ತಿ.

Advertisement

Udayavani is now on Telegram. Click here to join our channel and stay updated with the latest news.

Next