Advertisement

ಜೋತಿಷ, ಗಿಣಿಶಾಸ್ತ್ರದ ಫ‌ಲಿತಾಂಶಕ್ಕೂ ಕೊಕ್‌!

01:39 AM Mar 31, 2017 | Karthik A |

ಹೊಸದಿಲ್ಲಿ: ಈವರೆಗೆ ಯಾವುದೇ ಚುನಾವಣೆಯಿದ್ದರೂ ಇಂತಿಷ್ಟು ದಿನಗಳವರೆಗೆ ಮಾಧ್ಯಮಗಳು ಮತಗಟ್ಟೆ ಸಮೀಕ್ಷೆಗಳನ್ನು ಪ್ರಕಟಿಸುವಂತಿಲ್ಲ ಎಂಬ ನಿಯಮ ಜಾರಿಯಿತ್ತು. ಈಗ ಇದರ ವ್ಯಾಪ್ತಿಗೆ ಜೋತಿಷಿಗಳು ಹಾಗೂ ಗಿಣಿಶಾಸ್ತ್ರ ನುಡಿಯುವವರಿರೂ ಬಂದಿದ್ದಾರೆ. ಚುನಾವಣೆಯ ಅವಧಿಯಲ್ಲಿ ಇಂಥವರು ಗೆಲ್ಲುತ್ತಾರೆ ಅಥವಾ ಸೋಲುತ್ತಾರೆ ಎಂದು ಜೋತಿಷಿಗಳು, ಗಿಣಿಶಾಸ್ತ್ರ ನುಡಿಯುವವರು ಭವಿಷ್ಯ ನುಡಿದರೆ, ಅದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ. ಜತೆಗೆ, ಇಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಮತ್ತು ಮುದ್ರಿಸದಂತೆ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಿಗೆ ಆಯೋಗ ಸೂಚಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next