Advertisement

“ಅಷ್ಟಮಂಗಲ’ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ: ಗಿರಿಸಿದ್ದೇಶ್ವರ ಶ್ರೀ

12:45 AM May 30, 2022 | Team Udayavani |

ಹೊನ್ನಾಳಿ: ಅಷ್ಟಮಂಗಲ ಪ್ರಶ್ನೆಯನ್ನು ಟೀಕಿಸುವ ಹಾಗೂ ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಅಷ್ಟಮಂಗಲ ಪ್ರಶ್ನೆ ಕೇಳುವುದು ಹಿಂದೂಗಳಾದ ನಮ್ಮ ಧಾರ್ಮಿಕ ಹಕ್ಕಿನ ಬಗ್ಗೆ ಮಂಗಳೂರು ಹಾಗೂ ಉಡುಪಿಯ ಜನರಿಗೆ ಬಹಳ ಭಕ್ತಿ ಹಾಗೂ ಗೌರವವಿದೆ ಎಂದು ತಾಲೂಕಿನ ಹೊಟ್ಯಾಪುರ ಮಠ ಹಾಗೂ ಮಂಗಳೂರಿನ ಬಸವನಗುಡಿ ಮಠದ ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ವಿಚಾರವನ್ನು ತಮ್ಮ ಅಧಿಕಾರಕ್ಕಾಗಿ ಟೀಕಿಸುವುದು, ಹಿಂದೂ ಧರ್ಮವನ್ನು ಒಡೆಯುವ ಕೆಲಸವನ್ನು ಯಾವ ರಾಜಕಾರಣಿಯೂ ಮಾಡಬಾರದು. ಬೇರೆಯವರು ಬಂದು ನಮ್ಮ ಮನೆಗೆ ಬೀಗ ಹಾಕಿದರೆ ಸುಮ್ಮನಿರಬೇಕೆ? ದೇಶದ ವಿವಿಧ ಕಡೆಗಳಲ್ಲಿ ದೇವಸ್ಥಾನಗಳನ್ನು ಕೆಡವಿ ಮಸೀದಿ ಕಟ್ಟಿದ್ದಾರೆ. ಇದನ್ನು ನೋಡಿಕೊಂಡು ಸುಮ್ಮನೆ ಕೂರಬೇಕೇ, ಬೇರೆಯವರು ನಮ್ಮ ಮನೆಗೆ ಬಂದು ನಮ್ಮನ್ನು ಹೊರಗೆ ಕಳುಹಿಸಿ ಬೀಗ ಹಾಕಿದರೆ ನಾವು ಸುಮ್ಮನಿರಬೇಕಾ ಎಂದು ಪ್ರಶ್ನಿಸಿದರು.

ಪುರಾತತ್ವ ಇಲಾಖೆಯಿಂದ ಉತ್ಖನನ ಮಾಡಿಸಿ
ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ 64 ವೀರಶೈವ ಮಠಗಳಿದ್ದವು. ಈಗ ಬೆರಳಣಿಕೆಯಷ್ಟು ಮಾತ್ರ ಮಠಗಳಿದ್ದು ಉಳಿದೆಲ್ಲವೂ ಬೇರೆಯವರ ಪಾಲಾಗಿವೆ. ಮಂಗಳೂರಿನ ಮಳಲಿ ಮಸೀದಿ, ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗದ ಕುರಿತು ಮಾತನಾಡಿದ ಶ್ರೀಗಳು, ವಿವಾದಿತ ಮಳಲಿ ಮಸೀದಿ ಜಾಗದಲ್ಲಿ 1,500 ವರ್ಷಗಳ ಹಿಂದೆ ಶಿವ ಸಾನ್ನಿಧ್ಯ ಹಾಗೂ ಗುರುಮಠವಿತ್ತು ಎನ್ನುವ ಮಾಹಿತಿ ಇದೆ. ಸರಕಾರ ಮಧ್ಯಪ್ರವೇಶ ಮಾಡಿ ಪುರಾತತ್ವ ಇಲಾಖೆಯಿಂದ ಉತ್ಖನನ ಮಾಡಿಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂದರು.

ಮಂಗಳೂರಿನ ಚಿತ್ರ ಟಾಕೀಸ್‌ ಬಳಿ ಮಸೀದಿ ಇದೆ. ಅದರ ಎದುರು ಮುರ್ಗಿಮಠ ಕಾಂಪೌಂಡ್‌ ಇದೆ. ಇಲ್ಲಿಯೂ ಸಹ ಜಂಗಮ ಮಠ ಇತ್ತು ಎಂದು ಹೇಳಲಾಗುತ್ತಿದೆ. ಆದರೆ ದಾಖಲೆಗಳನ್ನು ತೆಗೆಯಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next