Advertisement

ತಣ್ಣೆರುಪಂತ ಶಾಲೆಗೆ ಬಿಎಸ್ಪಿ ತಂಡ ಭೇಟಿ

04:12 PM Aug 03, 2018 | |

ಉಪ್ಪಿನಂಗಡಿ : ಅಪಾಯದ ಅಂಚಿನಲ್ಲಿರುವ ತಣ್ಣೀರುಪಂತ ಸರಕಾರಿ ಶಾಲೆಗೆ ಸುದಿನ ವರದಿ ಆಧರಿಸಿ ಬಹುಜನ ಸಮಾಜವಾದಿ ಪಕ್ಷದ (ಬಿಎಸ್ಪಿ) ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ತಂಡ ಗುರುವಾರ ದಿಢೀರ್‌ ಭೇಟಿ ನೀಡಿದ್ದು, ನೂತನ ಕಟ್ಟಡ ಒದಗುವ ನಿರೀಕ್ಷೆ ಶಾಲಾಭಿವೃದ್ಧಿ ಸಮಿತಿಯಲ್ಲಿ ಮೂಡಿದೆ. 

Advertisement

ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ 93 ವರ್ಷಗಳಷ್ಟು ಹಳೆಯದು. ಶಾಲೆಯ ಎಂಟು ಕೊಠಡಿಗಳ ಪೈಕಿ ಎರಡು ಕೊಠಡಿಗಳ ಛಾವಣಿ ಮುರಿದು ಬೀಳುವ ಸ್ಥಿತಿಯಲ್ಲಿದೆ. ಈ ಕೊಠಡಿಗಳ ಮೇಲೆ ರೀ ಗಾತ್ರದ ಮರವೊಂದು ಮುರಿದು ಬೀಳುವ ಆತಂಕವೂ ನಿರ್ಮಾಣವಾಗಿದೆ. ಸುದಿನ ವರದಿ ಗಮನಿಸಿದ ಬಿಎಸ್ಪಿ ಜಿಲ್ಲಾ ಸಮಿತಿಯ ಭಾಸ್ಕರ ಮಾರೂರು, ತಾಲೂಕು ಅಧ್ಯಕ್ಷ ರಮೇಶ ಆರ್‌., ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಜಿ.ಎನ್‌., ತಾಲೂಕು ಉಸ್ತುವಾರಿ ಸಂಜೀವ ಆರ್‌. ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳೀಯ ಗ್ರಾ.ಪಂ. ಮಾಜಿ ಸದಸ್ಯ ಯೋಗೀಶ ಅಳಕೆ ಅವರಿಂದ ವಿವರವಾದ ಮಾಹಿತಿಯುಳ್ಳ ವರದಿ ಸ್ವೀಕರಿ ಸಿದ್ದು, ತತ್‌ಕ್ಷಣ ಶಿಕ್ಷಣ ಸಚಿವ ಆರ್‌. ಮಹೇಶ್‌ ಅವರನ್ನು ಖುದ್ದು ಭೇಟಿಯಾಗಿ, ಹೊಸ ಕಟ್ಟಡಕ್ಕೆ ಅನುದಾನ ಬಿಡುಗಡೆಮಾಡಿಸಲು  ಯತ್ನಿಸುವುದಾಗಿ ನಿಯೋಗ ಶಾಲಾಭಿವೃದ್ಧಿ ಸಮಿತಿಗೆ ತಿಳಿಸಿದೆ.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಧರ ಕರ್ಕೇರ, ಸ್ಥಳೀಯ ಪ್ರಮುಖರಾದ ಮಿಥುನ್‌ ಕುಲಾಲ್‌, ಹರಿಶ್ಚಂದ್ರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next