Advertisement

ಧರ್ಮಸ್ಥಳ ಕ್ಷೇತ್ರದಿಂದ ನೆರೆಪೀಡಿತರಿಗೆ ನೆರವು

11:21 PM Aug 10, 2019 | Lakshmi GovindaRaj |

ಬೆಳ್ತಂಗಡಿ: ರಾಜ್ಯದ ಪ್ರವಾಹ ಸಂತ್ರಸ್ತರ ನೆರವಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧಾವಿಸಿದ್ದು, ಸಂಸ್ಥೆಯ ಅಧ್ಯಕ್ಷ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರು ಸಂತ್ರಸ್ತರ ಪರಿಹಾರ ಕೇಂದ್ರಗಳಿಗೆ ತುರ್ತಾಗಿ ಹೊದಿಕೆಗಳನ್ನು ಒದಗಿಸಲು ಆದೇಶಿಸಿದ್ದಾರೆ. ಸರಕಾರದಿಂದ ತೆರೆಯಲಾಗಿರುವ ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಪರಿಹಾರ ಕೇಂದ್ರಗಳಿಗೆ ಸುಮಾರು 6,000 ಹೊದಿಕೆಗಳನ್ನು ವಿತರಿಸಲಾಗಿದೆ.

Advertisement

ಪರಿಹಾರ ಕಾಮಗಾರಿಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳುತ್ತಿರುವ ಸರಕಾರದ ಕ್ರಮಗಳಿಗೆ ಡಾ| ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಮಸ್ಯೆಯ ತೀವ್ರತೆಯ ಕುರಿತಂತೆ ಸರಕಾರದಿಂದ ಅಂಕಿ-ಅಂಶಗಳನ್ನು ಪಡೆದುಕೊಂಡ ಬಳಿಕ ಮುಂದಿನ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಹೆಗ್ಗಡೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next