Advertisement

ಮೃತ ಕುಟುಂಬಸ್ಥರಿಗೆ ನೆರವು

12:26 PM Jan 11, 2022 | Team Udayavani |

ಕಮಲಾಪುರ: ತಾಲೂಕಿನ ಕಿಣಿ ಸಡಕ್‌ ಗ್ರಾಮದ ರಸ್ತೆಯ ಅಪಘಾತದಲ್ಲಿ ಮೃತಪಟ್ಟ ಹಾಗೂ ನೀರಲ್ಲಿ ಬಿದ್ದು ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬದ ವರ್ಗದವರಿಗೆ ಶಾಸಕ ಬಸವರಾಜ ಮತ್ತಿಮಡು ಸೋಮವಾರ ಸಾಂತ್ವನ ಹೇಳಿದರು.

Advertisement

ಅಪಘಾತದಲ್ಲಿ ಮೃತಪಟ್ಟ ಕಿಣ್ಣಿ ಸಡಕ್‌ ಗ್ರಾಮದ ಶಿವಶರಣಪ್ಪ ಹನುಮಂತ್‌ ಅವರ ಮನೆಗೆ ಶಾಸಕರು ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರಲ್ಲದೇ ಸರ್ಕಾರದಿಂದ ಸಿಗುವ ಸೌಲಭ್ಯ ಒದಗಿಸಲಾಗುವುದು ಎಂದರಲ್ಲದೇ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಸಹ ಕಲ್ಪಿಸಿದರು.

ನಂತರ ಶಾಸಕರು, ಕಿಣ್ಣಿಸಡಕ್‌ದಲ್ಲಿ ಸ್ಪೀಡ್‌ ಬ್ರೇಕರ್‌ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಗೊಬ್ಬರವಾಡಿ ಗ್ರಾಮದಲ್ಲಿ ರವಿವಾರ ಬಾವಿಯಲ್ಲಿ ಬಿದ್ದ ಮಕ್ಕಳೆರಡು ಮೃತಪಟ್ಟ ಶಿವಶರಣಪ್ಪ ರಟಕಲ ಮನೆಗೂ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿದರು. ಮಕ್ಕಳು ಸಾವನ್ನಪ್ಪಿರುವುದು ದೊಡ್ಡ ದುರ್ಘ‌ಟನೆಯಾಗಿದೆ. ದು:ಖ ಸಹಿಸುವಂತೆ ಧೈರ್ಯ ತುಂಬಿದರು.

ಎಪಿಎಂಸಿ ಮಾಜಿ ಉಪಾಧ್ಯಕ್ಷ ರಾಜಕುಮಾರ ಕೋಟೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀಬಾಯಿ ವಿಜಯಕುಮಾರ ಮಾನೆ ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next