Advertisement

ಭದ್ರಾ ಕಾಡ ಪ್ರಾಧಿಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೂ ನೆರವು

02:09 AM Feb 02, 2021 | Team Udayavani |

ಮಂಗಳೂರು: ಭದ್ರಾ ಕಾಡ ಪ್ರಾಧಿಕಾರದ ವ್ಯಾಪ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯು ಒಳಪಡುತ್ತಿದ್ದು ಇಲ್ಲಿನ ನೀರಾವರಿ ಯೋಜನೆಗಳಿಗೂ ನೆರವು ನೀಡಲಾಗುವುದು ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆಯಾದ ಪವಿತ್ರಾ ರಾಮಯ್ಯ ಅವರು ಹೇಳಿದ್ದಾರೆ.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ| ವೀರೇಂದ್ರ ಹೆಗ್ಗಡೆ ಅವರನ್ನು ಪವಿತ್ರಾ ರಾಮಯ್ಯ ಭೇಟಿ ಮಾಡಿದರು.

12 ಜಿಲ್ಲೆಗಳ ವ್ಯಾಪ್ತಿ
ಈ ಸಂದರ್ಭದಲ್ಲಿ ಪ್ರಾಧಿಕಾರದ ಬಗ್ಗೆ ವಿವರಿಸಿದ ಅವರು, ರಾಜ್ಯ ಸರಕಾರ ಅಚ್ಚುಕಟ್ಟು ಪ್ರದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಅಧಿನಿಯಮ 1980ರ ಕಾಯ್ದೆಯಡಿ ಕಾಡ ಪ್ರಾಧಿಕಾರವನ್ನು 1979ನೇ ಇಸವಿಯಲ್ಲಿ ಸ್ಥಾಪನೆ ಮಾಡಿತ್ತು. ಪ್ರಾಧಿಕಾರಕ್ಕೆ ಮಲೆನಾಡು, ಅರೆ ಮಲೆನಾಡು, ಕರಾವಳಿ ಹಾಗೂ ಬಯಲು ಸೀಮೆ ಪ್ರದೇಶದ ಭೌಗೋಳಿಕ ವ್ಯಾಪ್ತಿಯಲ್ಲಿ ಬರುವ ಭಾರೀ ಮತ್ತು ಮಧ್ಯಮ ನೀರಾವರಿ ಯೋಜನೆಗಳು ಒಳಪಡುತ್ತವೆ. ಒಟ್ಟು 12 ಜಿಲ್ಲೆಗಳು ಹಾಗೂ 30 ಬೃಹತ್‌ ಮತ್ತು ಮಧ್ಯಮ ನೀರಾವರಿ ಯೋಜನೆಗಳು ಸೇರಿವೆ ಎಂದು ಪವಿತ್ರಾ ಹೇಳಿದರು.

ಈ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯು ಪ್ರಾಧಿಕಾರ ವ್ಯಾಪ್ತಿಗೆ ಸೇರುತ್ತದೆ. ಆದರೆ ಕಾಡ ಪ್ರಾಧಿಕಾರದ ಯಾವ ಯೋಜನೆಗಳು ಇಲ್ಲಿಯವರೆಗೂ ಈ ಭಾಗದಲ್ಲಿ ಮುಟ್ಟಿರುವುದಿಲ್ಲ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಅಧಿಕಾರಿಗಳೊಂದಿಗೆ ಕೂಲಂಕಷವಾಗಿ ಚರ್ಚಿಸಿದಾಗ ದ.ಕ. ಜಿಲ್ಲೆಯಲ್ಲಿ ನೇತ್ರಾವತಿ ನದಿಯು 1,100 ಹೆಕ್ಟೇರ್‌, ಸ್ವರ್ಣಾ ನದಿಯು 19,000 ಹೆಕ್ಟೇರ್‌, ಗುರುಪುರ ನದಿ 3,400 ಹೆಕ್ಟೇರ್‌, ಮೂಲ್ಕಿ ನದಿ 5,500 ಹೆಕ್ಟೇರ್‌, ನಾರಿ ಹೊಳೆ 9,500 ಹೆಕ್ಟೇರ್‌ ಮತ್ತು ಪಯಸ್ವಿನಿ ನದಿಯು 2,000 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಯೋಜನೆ ಹೊಂದಿರುವುದು ಗಮನಕ್ಕೆ ಬಂದಿದೆ. ಈ ಆಲೋಚನೆ ಮುಂದಿಟ್ಟುಕೊಂಡು ಅಚ್ಚುಕಟ್ಟು ಭಾಗ ವನ್ನು ದ.ಕ.ದಲ್ಲಿ ವಿಸ್ತರಿಸಲು ಕಾರ್ಯ ಯೋಜನೆ ರೂಪಿಸುವ ಸಲುವಾಗಿ ಮಾರ್ಗದರ್ಶನ ಪಡೆಯಲು ಡಾ| ಹೆಗ್ಗಡೆ ಅವರನ್ನು ಭೇಟಿಯಾಗಿ ಸುದೀರ್ಘ‌ವಾಗಿ ಚರ್ಚೆ ನಡೆಸಿರುವುದಾಗಿ ಪವಿತ್ರಾ ರಾಮಯ್ಯ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next