Advertisement

2022ರ ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆ : “ಅಯೋಧ್ಯೆ’ಯಲ್ಲಿ ಯೋಗಿ ಕಣಕ್ಕೆ?

10:19 PM Jul 25, 2021 | Team Udayavani |

ಲಕ್ನೋ: 2022ರ ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್‌ ಅವರು ಅಯೋಧ್ಯೆಯಿಂದ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡತೊಡಗಿದೆ.

Advertisement

ಭಾನುವಾರ ಅಯೋಧ್ಯೆ ಕ್ಷೇತ್ರದ ಶಾಸಕ ವೇದ್‌ ಪ್ರಕಾಶ್‌ ಗುಪ್ತಾ ಅವರು, “ಸಿಎಂ ಯೋಗಿಗಾಗಿ ಸೀಟು ಬಿಟ್ಟುಕೊಡಲು ನಾನು ರೆಡಿ’ ಎಂದು ಹೇಳಿರುವುದು ಈ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ.

ಸಿಎಂ ಏನಾದರೂ ಇಲ್ಲಿ ಕಣಕ್ಕಿಳಿದರೆ ನಮಗೆಲ್ಲರಿಗೂ ಅದು ಹೆಮ್ಮೆಯ ವಿಚಾರ. ಯಾರು ಎಲ್ಲಿಂದ ಸ್ಪರ್ಧಿಸಬೇಕು ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ. ಆದರೆ, ಯೋಗಿ ಅವರು ಅಯೋಧ್ಯೆಯಲ್ಲಿ ಕಣಕ್ಕಿಳಿದರೆ ನಾವು ಅವರ ಪರ ಪ್ರಚಾರ ಮಾಡುತ್ತೇನೆ. ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದೂ ಗುಪ್ತಾ ಹೇಳಿದ್ದಾರೆ.

ಇದನ್ನೂ ಓದಿ :ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ; ರಾಗ ಬದಲಿಸಿದ ನಾಯಕರು?

Advertisement

Udayavani is now on Telegram. Click here to join our channel and stay updated with the latest news.

Next