Advertisement

Karkala ಪೂರ್ವ ದ್ವೇಷದಿಂದ ವ್ಯಕ್ತಿಗೆ ಹಲ್ಲೆ, ಜೀವ ಬೆದರಿಕೆ; ದೂರು ದಾಖಲು

11:53 PM Feb 14, 2024 | Team Udayavani |

ಕಾರ್ಕಳ: ಪೂರ್ವ ದ್ವೇಷದಿಂದ ವ್ಯಕ್ತಿಯೋರ್ವರ ಮೇಲೆ ತಂಡವೊಂದು ಹಲ್ಲೆ ನಡೆಸಿದ
ಘಟನೆ ಕಾರ್ಕಳ ಪೇಟೆಯ ಅನಂತ ಶಯನದ ಬಳಿ ನಡೆದಿದೆ. ದುರ್ಗ ಗ್ರಾಮದ ದಿನೇಶ್‌(52) ಅವರು ಹಲ್ಲೆಗೊಳಗಾದವರು. ಸ್ಥಳಿಯ ನಿವಾಸಿ ರತ್ನಾಕರ ಹಾಗೂ ಇನ್ನಿತರರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ.

Advertisement

ದಿನೇಶ್‌ ಮತ್ತು ರತ್ನಾಕರ ಅವರ ನಡುವೆ ಹಳೆ ದ್ವೇಷವಿದ್ದು, ಫೆ. 12ರಂದು ದಿನೇಶ್‌ ಅವರು ನ್ಯಾಯಾಲಯಕ್ಕೆ ಆಗಮಿಸುತ್ತಿದ್ದ ಸಂದರ್ಭ, ಆರೋಪಿ ರತ್ನಾಕರ ಆತನನ್ನು ಕಂಡು ಗುರಾಯಿಸಿದ್ದ, ರಾತ್ರಿ ಅನಂತಶಯನದ ಬಳಿ ಅಟೋ ರಿಕ್ಷಾ ನಿಲ್ಲಿಸಿ ಪಾನ್‌ ಬೀಡ ತಿನ್ನುತ್ತಿದ್ದ ಸಂದರ್ಭ ರತ್ನಾಕರ ಹಾಗೂ ಇನ್ನು ಇಬ್ಬರು ಸೇರಿಕೊಂಡು, ಆಟೋ ರಿಕ್ಷಾಕ್ಕೆ ಕಾರು ಅಡ್ಡ ನಿಲ್ಲಿಸಿ ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿರುವ ಕುರಿತು ನಗರ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next