Advertisement

ಮುದಸ್ಸಿರ್‌ ಮೇಲಿನ ಹಲ್ಲೆ ಆರೋಪಿಗಳ ಸೆರೆ

11:57 AM Jan 12, 2018 | Team Udayavani |

ಸುರತ್ಕಲ್‌: ಜ. 3ರಂದು ರಾತ್ರಿ ಸುರತ್ಕಲ್‌ ಬಳಿ ಮುದಸ್ಸಿರ್‌(22)ಗೆ ಹಲ್ಲೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪಣಂಬೂರು ಉಪ ವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.

Advertisement

ಬೈಕಂಪಾಡಿಯ ಕೂರಿಕಟ್ಟ ನಿವಾಸಿ,   ಮೂಲತಃ ಬಾಗಲಕೋಟೆ ಮುಟ್ಟಲ ಗೇರಿಯ ಪ್ರೀತಂ (20) ಹಾಗೂ ಸುರತ್ಕಲ್‌ನ ಅಗರಮೇಲು ನಿವಾಸಿ ಯಶೋಧರ್‌ (20) ಬಂಧಿ ತರು.  

ದೀಪಕ್‌ ರಾವ್‌ ಕೊಲೆ ಪ್ರಕರಣದ ಬೆನ್ನಲ್ಲೇ ತಡ ರಾತ್ರಿ ಸುರತ್ಕಲ್‌ ಬಸ್‌ ನಿಲ್ದಾಣದ ಬಳಿ ಬೈಕಿನಲ್ಲಿ ಬಂದ ಆರೋಪಿಗಳು ಮಾರಕಾಸ್ತ್ರಗಳಿಂದ ಮುದಸ್ಸಿರ್‌ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. 

ದೀಪಕ್‌ ರಾವ್‌ ಹತ್ಯೆಗೆ ಪ್ರತೀ ಕಾರವಾಗಿ ಮುದಸ್ಸಿರ್‌ಗೆ ಹಲ್ಲೆ ನಡೆಸಿ ದ್ದೇವೆ ಎಂದು ಆರೋಪಿಗಳು ತಪ್ಪೊಪ್ಪಿ ಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಎರಡು ವಿಶೇಷ ತನಿಖಾ ದಳ ರಚಿಸ ಲಾಗಿತ್ತು. ಪಣಂಬೂರು ಪೊಲೀಸ್‌ ಠಾಣಾ ನಿರೀಕ್ಷಕ ರಫೀಕ್‌ ಕೆ.ಎಂ. ನೇತೃತ್ವದಲ್ಲಿ ಮೊಹಮ್ಮದ್‌, ಕುಶಲ ಮಣಿಯಾಣಿ, ಸತೀಶ್‌, ಇಸಾಕ್‌,  ಕೃಷ್ಣ ಬಿ.ಕೆ., ವಿಜಯ್‌ ಕಾಂಚನ್‌, ರಾಜ, ಶರಣ್‌ ಕಾಳಿ, ಚಂದ್ರಹಾಸ ಆಳ್ವ, ರಾಧಾಕೃಷ್ಣ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next