Advertisement

ರಾಷ್ಟ್ರಪತಿ ಭೇಟಿ  ಮಾಡಿದ ಪ್ರತಿಪಕ್ಷಗಳ ನಿಯೋಗ 

06:00 AM Aug 10, 2018 | Team Udayavani |

ಹೊಸದಿಲ್ಲಿ: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿವಾದ ಸಂಬಂಧ ಮಾಜಿ ಪ್ರಧಾನಿ ದೇವೇಗೌಡ ನೇತೃತ್ವದ ಪ್ರತಿಪಕ್ಷಗಳ ನಿಯೋಗವು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ರನ್ನು ಗುರುವಾರ ಭೇಟಿ ಮಾಡಿ, ಯಾವುದೇ ಕಾರಣಕ್ಕೂ ಒಬ್ಬನೇ ಒಬ್ಬ ಭಾರತೀಯ ಪ್ರಜೆ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಮನವಿ ಸಲ್ಲಿಸಿದೆ.  ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ಮೌಲ್ಯಗಳನ್ನು ಹಾಳು ಮಾಡಲು ಹೊರ ಟಿದೆ. ಸುಪ್ರೀಂ ಕೋರ್ಟ್‌ಗೆ ವಿರುದ್ಧವಾಗಿ ತಪ್ಪು ಮಾಹಿ ತಿ ಗಳನ್ನು ಹರಡುತ್ತಿದೆ. ಎನ್‌ಆರ್‌ಸಿ ಪಟ್ಟಿಯಿಂದ ಅಸ್ಸಾಂನಲ್ಲಿ ದೀರ್ಘ‌ಕಾಲದಿಂದ ನೆಲೆಸಿರುವ 40 ಲಕ್ಷ  ಭಾರತೀಯರು ದೇಶ ತೊರೆಯ ಬೇಕಾ ಗುತ್ತದೆ. ಈ ಪೈಕಿ ಬಂಗಾಳಿಗಳು, ಅಸ್ಸಾಮಿ, ರಾಜಸ್ಥಾನಿ, ಬಿಹಾರಿ, ಗೋರ್ಖಾ, ಪಂಜಾ ಬಿ, ಬುಡಕಟ್ಟು ಜನರಿದ್ದಾರೆ ಎಂದು ನಿಯೋಗ ವಿವರಿಸಿದೆ. ನಿಯೋಗದಲ್ಲಿ ಕಾಂಗ್ರೆಸ್‌ನ ಆನಂದ್‌ ಶರ್ಮಾ ಸೇರಿ ಟಿಎಂಸಿ, ಸಿಪಿಎಂ, ಟಿಡಿಪಿ, ಆಪ್‌ ಮುಖಂಡರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next