Advertisement

Assam-Meghalaya: ಗಡಿ ಸಂಘರ್ಷ ಬಿಲ್ಲು-ಬಾಣದ ದಾಳಿ, ವ್ಯಕ್ತಿಗೆ ಗಾಯ

11:37 PM Sep 27, 2023 | Team Udayavani |

ಶಿಲ್ಲಾಂಗ್‌: ಈಶಾನ್ಯ ಭಾಗದಲ್ಲಿ ಮಣಿಪುರದಲ್ಲಿ ಹಿಂಸೆ ಮತ್ತೆ ಸ್ಫೋಟಗೊಂಡಿರು ವಂತೆಯೇ, ಅಸ್ಸಾಂ-ಮೇಘಾಲಯ ಅಂತರರಾಜ್ಯ ಗಡಿ ವಿವಾದದ ಕಿಡಿ ಮತ್ತೆ ಹೊತ್ತಿಕೊಂಡಿದೆ. ಗಡಿ ಪ್ರದೇಶದಲ್ಲಿರುವ ಸ್ಥಳೀಯರು ಒಬ್ಬರ ಮೇಲೊಬ್ಬರು ಬಿಲ್ಲುಬಾಣಗಳಿಂದ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ. ಮೇಘಾಲಯದ ಲಪಂಗಾಪ್‌ ಗ್ರಾಮ ಹಾಗೂ ಅಸ್ಸಾಂನ ತಪತ್‌ ಪ್ರದೇಶದ ಗಡಿ ಭಾಗದ ನಿವಾಸಿಗಳ ನಡುವೆ ಘರ್ಷಣೆ ಏರ್ಪಟ್ಟಿದೆ.

Advertisement

ಲಪಂಗಾಪ್‌ ಗ್ರಾಮದ ರೈತರು ಹೊಲದಲ್ಲಿ ಕೆಲಸ ಮಾಡುವಾಗ ಅಲ್ಲಿಯೇ ಅಡಗಿಕೊಂಡಿದ್ದ ಅಸ್ಸಾಂನ ನಿವಾಸಿಗಳು ಅವರ ಮೇಲೆ ದಾಳಿ ನಡೆಸಿದ್ದಾರೆಂದು ರೈತರು ಆರೋಪಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಲಪಂಗಾಪ್‌ನ 200ಕ್ಕೂ ಅಧಿಕ ಮಂದಿ ಅಸ್ಸಾಂನ ನಿವಾಸಿಗಳ ಮೇಲೆ ದಾಳಿ ನಡೆಸಿದ್ದಾರೆ. ಇತ್ತ ತಪತ್‌ ನಿವಾಸಿಗಳು ತಾವೇನೂ ಮಾಡೇ ಇಲ್ಲ. ಇದಕ್ಕಿದ್ದಂತೆ 200ಕ್ಕೂ ಅಧಿಕ ಮಂದಿ ಬಿಲ್ಲು-ಬಾಣಗಳಿಂದ ನಮ್ಮ ಮೇಲೆ ದಾಳಿ ನಡೆಸಿದರು ಎಂದು ಆರೋಪಿಸಿದ್ದಾರೆ. ಎರಡೂ ಕಡೆಯವರು ಹಲವಾರು ಗುಡಿಸಲುಗಳಿಗೆ ಬೆಂಕಿ ಇಟ್ಟಿದ್ದಾರೆ. ಇದೇ ವೇಳೆ ಕಲ್ಲು ತೂರಾಟ ನಡೆದು, ತಪತ್‌ನ ವ್ಯಕ್ತಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿರುವುದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next