Advertisement

ಮದುವೆ ಆಗೋ ಮುನ್ನ ಬಿಜೆಪಿಯನ್ನು ಕೇಳಿ: ಸುರ್‌ಜೇವಾಲಾ

05:42 PM Dec 20, 2017 | Team Udayavani |

ಹೊಸದಿಲ್ಲಿ : ದೇಶದ ಯುವಕ, ಯುವತಿಯರು ತಾವು ಮದುವೆಯಾಗುವುದಕ್ಕೆ ಮತ್ತು ತಾವು ಮದುವೆಯಾಗುವ ಸ್ಥಳಗಳನ್ನು ನಿರ್ಧರಿಸುವುದಕ್ಕೆ ಕೇಸರಿ ಪಕ್ಷದ ಒಪ್ಪಿಗೆ ಪಡೆದುಕೊಳ್ಳಬೇಕು ಎಂದು ಕಾಂಗ್ರೆಸ್‌ ನಾಯಕ ರಣದೀಪ್‌ ಸುರ್‌ಜೇವಾಲಾ ಅವರು ಬಿಜೆಪಿಯ ವಿರುದ್ಧ  ವ್ಯಂಗ್ಯವಾಡಿದ್ದಾರೆ.

Advertisement

ಮಧ್ಯಪ್ರದೇಶದ ಬಿಜೆಪಿ ಶಾಸಕರೊಬ್ಬರು “ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರು ಭಾರತದಲ್ಲಿ ಏಕೆ ಮದುವೆಯಾಗಲಿಲ್ಲ; ವಿದೇಶದಲ್ಲಿ ಯಾಕೆ ಮದುವೆಯಾದರು’ ಎಂದು ಪ್ರಶ್ನಿಸಿರುವುದಕ್ಕೆ ಪ್ರತಿಕ್ರಿಯೆಯಾಗಿ ಸುರ್‌ಜೇವಾಲಾ ಅವರು ಈ ಕಿಡಿನುಡಿಗಳನ್ನು ಆಡಿದ್ದಾರೆ.

ದೇಶದ ಯುವಕರೇ, ಯುವತಿಯರೇ, ನೀವು ಮದುವೆಯಾಗುವ ಮುನ್ನ, ಮದುವೆ ಸಮಾರಂಭದ ಸ್ಥಳವನ್ನು ತೀರ್ಮಾನಿಸುವ ಮುನ್ನ, ಮದುವೆ ಊಟದಲ್ಲಿ ಏನೇನೆಲ್ಲ ಖಾದ್ಯಗಳು ಇರಬೇಕು ಎಂದು ನಿರ್ಧರಿಸುವ ಮುನ್ನ ದಯವಿಟ್ಟು ಬಿಜೆಪಿಯ ಅನುಮತಿ ಕೇಳಿ ಎಂದು ಸುರ್‌ಜೇವಾಲಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next