Advertisement

ಸಾಧನೆ ತಿಳಿಸಿ ಮತ ಯಾಚಿಸಿ: ಬಿ.ವೈ. ರಾಘವೇಂದ್ರ

11:47 PM Apr 01, 2019 | sudhir |

ಬೈಂದೂರು: ಭಾರತೀಯ ಜನತಾ ಪಾರ್ಟಿ ಬೈಂದೂರು ವಿಧಾನಸಭಾ ಕ್ಷೇತ್ರ ಇದರ ವತಿಯಿಂದ ಪಕ್ಷದ ಚುನಾವಣಾ ಪ್ರಚಾರ ಸಭೆ ಹಡವಿನಕೋಣೆ ಶ್ರೀಗಣೇಶ ಸೇವಾ ಸಂಘದ ಆವರಣದಲ್ಲಿ ನಡೆಯಿತು.

Advertisement

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಮಾತನಾಡಿ ಕೇಂದ್ರ ಸರಕಾರದ ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಸಂತೃಪ್ತಿಯಿದೆ.

ಯೋಜನೆಗಳನ್ನು ಕಾರ್ಯಕರ್ತರು ಮನೆ ಮನೆಗೆ ಕಲ್ಪಿಸಬೇಕು. 5 ವರ್ಷದ ಸಾಧನೆಗಳನ್ನು ಕಾರ್ಯಕರ್ತರು ಪ್ರತಿಯೊಬ್ಬ ಮತದಾರರಿಗೂ ತಿಳಿಸಿ ಮತಯಾಚನೆ ಮಾಡಬೇಕು ಎಂದರು.

ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ದೇಶದಲ್ಲಿ ಮೋದಿ ನೇತೃತ್ವದ ಸರಕಾರ ಇಡೀ ದೇಶದ ಘನತೆಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸುವಂತೆ ಮಾಡಿದೆ. ದೇಶದ ಭವಿಷ್ಯಕ್ಕೆ ಮೋದಿಜೀಯನ್ನು ಬೆಂಬಲಿಸಬೇಕು ಎಂದರು.
ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಬಿಜೆಪಿ ಮಂಡಲದ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಜಿ.ಪಂ ಸದಸ್ಯ ಶಂಕರ ಪೂಜಾರಿ, ತಾ.ಪಂ ಸದಸ್ಯ ಪುಷ್ಪರಾಜ್‌ ಶೆಟ್ಟಿ, ನಟರಾಜ, ದತ್ತಾತ್ರೇಯ, ಗ್ರಾಮ ಸಮಿತಿ ಅಧ್ಯಕ್ಷ ಶಂಕರ ಮೇಸ್ತ, ಸ್ಥಳೀಯ ಜಮಾಯಿತ್‌ ಅಧ್ಯಕ್ಷ ಭಾತ್ಯಾ ಇಸಾಕ್‌, ಕೆ.ಎನ್‌. ಆಚಾರ್‌ ಉಪಸ್ಥಿತರಿದ್ದರು.

Advertisement

ಮಂಡಲದ ಕಾರ್ಯದರ್ಶಿ ದೀಪಕ್‌ ಕುಮಾರ್‌ ಶೆಟ್ಟಿ ಪ್ರಾಸ್ತಾವಿಸಿದರು. ತುಳಸಿದಾಸ್‌ ಮೊಗೇರ್‌ ನಿರ್ವಹಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next