Advertisement

ಏಷ್ಯಾದ ಮೊದಲ ಬಸ್‌ ಆದ್ಯತಾ ಪಥ ಸಿದ್ಧ

05:24 AM Jun 19, 2020 | Lakshmi GovindaRaj |

ಬೆಂಗಳೂರು: ಬಹುನಿರೀಕ್ಷಿತ ಏಷ್ಯಾದ ಮೊದಲ “ಬಸ್‌ ಆದ್ಯತಾ ಪಥ’ (ಬಿಪಿಎಲ್‌)ದ ಲೋಕಾರ್ಪಣೆಗೆ ಕೊನೆಗೂ ಕಾಲ ಸನ್ನಿಹಿತವಾಗಿದ್ದು, ತಿಂಗಳಲ್ಲಿ ಸೆಂಟ್ರಲ್‌ ಸಿಲ್ಕ್ ಬೋರ್ಡ್‌- ಕೆ.ಆರ್‌. ಪುರ ನಡುವಿನ ಇಡೀ ಮಾರ್ಗ ಸೇವೆಗೆ  ಮುಕ್ತವಾಗಲಿದೆ. ಒಟ್ಟಾರೆ 22 ಕಿ.ಮೀ. ಉದ್ದದ ಮಾರ್ಗದಲ್ಲಿ ಬಿಬಿಎಂಪಿ ಈಗಾಗಲೇ ಅರ್ಧ ದಾರಿ ಕ್ರಮಿಸಿದ್ದು, ಸಿಲ್ಕ್ ಬೋರ್ಡ್‌ ನಿಂದ ಮಾರತ್‌ಹಳ್ಳಿವರೆಗೂ ಆದ್ಯತಾ ಪಥ ನಿರ್ಮಿಸುವ ಕಾರ್ಯ ಮುಗಿದಿದೆ.

Advertisement

ಉಳಿದರ್ಧ ಜೂನ್‌ ಅಂತ್ಯಕ್ಕೆ  ಅಥವಾ ಜುಲೈ ಮಧ್ಯಭಾಗದ ವೇಳೆಗೆ ಪೂರ್ಣಗೊಳಿಸುವ ಗುರಿ ಇದೆ. ಈ ನಿಟ್ಟಿನಲ್ಲಿ ಮೂರು ತಂಡಗಳು ಬೊಲಾರ್ಡ್‌ ಗಳ ಅಳವಡಿಕೆ ಮಾಡಲಾಗುತ್ತಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಂದ್‌ ಆಗಿರುವ ಐಟಿ-ಬಿಟಿ ಸೇರಿದಂತೆ ಆ  ಮಾರ್ಗದ ಕಂಪನಿಗಳು ಜುಲೈ ನಂತರ ತೆರೆಯಲಿವೆ. ಆಗ, ತೀವ್ರ ಸಂಚಾರ  ದಟ್ಟಣೆ ಉಂಟಾಗಿ ಯೋಜನೆ ಅನುಷ್ಠಾನದಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತ್ವರಿತ  ಗತಿಯಲ್ಲಿ ನಿರ್ಮಾಣ ಕಾರ್ಯ ನಡೆದಿದ್ದು,  ತಂಡಗಳು ಹಗಲು ಮತ್ತು ರಾತ್ರಿ ಕಾರ್ಯನಿರ್ವ ಹಿಸುತ್ತಿವೆ. ದಿನಕ್ಕೆ 500ರಿಂದ 600 ಬೊಲಾರ್ಡ್‌ಗಳನ್ನು ಅಳವಡಿಸಲಾಗುತ್ತಿದೆ.

ಇನ್ನೂ ಹತ್ತು ಸಾವಿರ ಬೊಲಾರ್ಡ್‌ಗಳ ದಾಸ್ತಾನಿದ್ದು, 14 ಸಾವಿರ ಅಹಮದಾಬಾದ್‌ನಿಂದ ಪೂರೈಕೆ  ಆಗಲಿವೆ. ಹೆಚ್ಚು-ಕಡಿಮೆ ತಿಂಗಳ ಅಂತರದಲ್ಲಿ ಪೂರ್ಣಗೊಳ್ಳಲಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಲಾಕ್‌ಡೌನ್‌ ಒಂದು ರೀತಿ ಬಸ್‌ ಆದ್ಯತಾ ಪಥಕ್ಕೆ ಅನುಕೂಲವೂ ಆಗಿದೆ. ಯಾಕೆಂದರೆ, ಯಾವಾಗಲೂ ವಾಹನಗಳಿಂದ ತುಂಬಿತುಳುಕುವ ರಸ್ತೆಗಳು ಈಗ  ಖಾಲಿ ಇವೆ. ಬೊಲಾರ್ಡ್‌ಗಳು, ಮಾರ್ಕಿಂಗ್‌, ಮಾರ್ಗ ದುದ್ದಕ್ಕೂ ಬರುವ ಬಡಾವಣೆಗಳಿಗೆ ದಾರಿ ಮಾಡಿಕೊಡುವುದು ಮತ್ತಿತರ ಕಾರ್ಯಗಳು ಸುಲಭವಾಗಿದೆ ಎಂದೂ ಅಧಿಕಾರಿಗಳು ತಿಳಿಸುತ್ತಾರೆ.

ಇನ್ನೂ 3ಕ್ಕೆ ವಿನ್ಯಾಸ ಸಿದ್ಧ: ಮೂರು ಕಾರಿಡಾರ್‌ಗಳನ್ನು ಆದ್ಯತೆ ಮೇರೆಗೆ ತೆಗೆದುಕೊಂಡಿದ್ದು, ಬಿಎಂಟಿಸಿ ಹಾಗೂ ನಗರ ಮತ್ತು ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್) ಸಂಯುಕ್ತವಾಗಿ ವಿನ್ಯಾಸ ರೂಪಿಸಿವೆ. ಕರ್ನಾಟಕ ರಸ್ತೆ  ಅಭಿವೃದಿಟಛಿ ನಿಗಮ (ಕೆಆರ್‌ಡಿಸಿಎಲ್‌) ಇದನ್ನು ಅನುಷ್ಠಾನಗೊಳಿಸಲಿದ್ದು, ಈ ಸಂಬಂಧದ ಪ್ರಸ್ತಾವನೆಯನ್ನು ನಗರಾಭಿವೃದಿಟಛಿ ಇಲಾಖೆ ಮೂಲಕ ಹಣಕಾಸು ಇಲಾಖೆಗೆ ಸಲ್ಲಿಸಲಾಗಿದೆ. ಈ ಮಧ್ಯೆ ಯೋಜನೆಗೆ ಸಂಬಂಧಿಸಿದ  ಪ್ರಾಥಮಿಕ ಕಾರ್ಯ ಕೈಗೆತ್ತಿಕೊಳ್ಳಲು ಸಿದ್ಧತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

“ಸೆಂಟ್ರಲ್‌ ಸಿಲ್ಕ್ ಬೋರ್ಡ್‌- ಕೆ.ಆರ್‌. ಪುರ ನಡುವಿನ ಆದ್ಯತಾ ಪಥದಲ್ಲಿ ಬಸ್‌ಗಳ ಸಂಚಾರಕ್ಕೆ ಬಿಎಂಟಿಸಿ ಸಿದ್ಧವಾಗಿದೆ. ಜತೆಗೆ ಡಲ್ಟ್  ಸಹಯೋಗದಲ್ಲಿ ಹಳೆಯ ವಿಮಾನ ನಿಲ್ದಾಣ ರಸ್ತೆ, ತುಮಕೂರು ರಸ್ತೆಯ ಹೊರವರ್ತುಲ ರಸ್ತೆ, ಎಲೆಕ್ಟ್ರಾನಿಕ್‌ ಸಿಟಿ ಸೇರಿದಂತೆ ಮೂರು ಕಾರಿಡಾರ್‌ ಗಳಲ್ಲಿ ಆದ್ಯತೆ ಮೇರೆಗೆ ಬಿಪಿಎಲ್‌ ನಿರ್ಮಿಸುವ ಸಂಬಂಧ ವಿನ್ಯಾಸ ರೂಪಿಸಿ, ಅನುಷ್ಠಾನದ ಜವಾಬ್ದಾರಿ ಹೊತ್ತ ಕೆಆರ್‌ಡಿಸಿಎಲ್‌ಗೆ ನೀಡಲಾಗಿದೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಸ್ಪಷ್ಟಪಡಿಸಿದರು.

Advertisement

ಬಿಪಿಎಲ್‌ಗೆ ಸಕಾಲ; ಸಿಎಫ್ಬಿ: “ಬಸ್‌ ಆದ್ಯತಾ ಪಥಗಳ ನಿರ್ಮಾಣಕ್ಕೆ ಇದು ಸಕಾಲ. ಹೇಗೆಂದರೆ ಒಂದೆಡೆ ವಾಹನಗಳ ದಟ್ಟಣೆ ಇಲ್ಲ. ಮತ್ತೂಂದೆಡೆ ಜಾಗತಿಕವಾಗಿ ಪರಿಸರ ಪ್ರಜ್ಞೆ ಜಾಗೃತವಾಗಿದೆ. ಲಾಕ್‌ ಡೌನ್‌ನಿಂದ ವಾಯುಮಾಲಿನ್ಯ  ಸಾಕಷ್ಟು ಪ್ರಮಾಣದಲ್ಲಿ ತಗ್ಗಿದೆ. ಇದಕ್ಕೆ ಕಾರಣ ತಾವು ಬಳಸುವ ವಾಹನಗಳು ಎಂಬುದು ಮನದಟ್ಟಾಗಿದೆ. 6 ತಿಂಗಳು ಅಥವಾ ವರ್ಷದ ನಂತರ ಜನ ಸಮೂಹ ಸಾರಿಗೆಯತ್ತ ಜನ ಮುಖಮಾಡುತ್ತಾರೆ ಎಂದು ಸಿಟಿಜನ್‌ ಫಾರ್‌  ಬೆಂಗಳೂರು ಸಹ ಸಂಸ್ಥಾಪಕ ಶ್ರೀನಿವಾಸ್‌ ಅಲವಿಲ್ಲಿ ತಿಳಿಸಿದರು.

ಯಶಸ್ಸಿಗೆ ಬೇಕು ಉತ್ತೇಜನ: ಬಸ್‌ ಆದ್ಯತಾ ಪಥ ನಿರ್ಮಿಸಿದರೆ ಸಾಲದು. ಅದರ ಯಶಸ್ಸು ಪ್ರಯಾಣಿಕರ ಮೇಲೆ ನಿಂತಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಸೆಳೆಯುವ ಪ್ರಯತ್ನಗಳು ಬಿಎಂಟಿಸಿಯಿಂದ ನಡೆಯಬೇಕಿದೆ. ಈ ನಿಟ್ಟಿನಲ್ಲಿ  ದ್ದೇಶಿತ ಪಥಗಳಲ್ಲಿ ಪ್ರಯಾಣ  ದರ ಕಡಿಮೆ ಮಾಡಬೇಕು. ಫ್ಲ್ಯಾಟ್‌ ಫೇರ್‌ (ಉದಾ: ನಿಗಿದತ ಅಂತರಕ್ಕೆ 10 ರೂ. ಅಥವಾ 20 ರೂ. ನಿಗದಿಪಡಿಸುವುದು) ನಿಗದಿಪಡಿಸಬೇಕು. ಫ್ರೀಕ್ವೆನ್ಸಿಗಳ ನಿರ್ವಹಣೆ ವ್ಯವಸ್ಥಿತವಾಗಿ ಆಗಬೇಕು. ಆ  ಮೂಲಕ ಸಮಯ ಉಳಿತಾಯದ ಮನವರಿಕೆ ಮಾಡಿಕೊಡಬೇಕು. ಇದಕ್ಕೆ ಪೂರಕವಾಗಿ ಸರ್ಕಾರ ಪ್ರಯಾಣ ದರ ಇಳಿಕೆಯಿಂದಾಗುವ ಹೊರೆ ತಗ್ಗಿಸಲು ಅನುದಾನ ನೀಡಬೇಕು. ಡೀಸೆಲ್‌ ಮೇಲಿನ ಸೆಸ್‌ನಿಂದ ವಿನಾಯ್ತಿ ನೀಡುವುದು ಸೇರಿದಂತೆ ಹಲವು ಉತ್ತೇಜಕ ಕಾರ್ಯಗಳಾಗಬೇಕೆಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಆದ್ಯತಾ ಪಥಗಳ ವಿವರ: 12 ಅಧಿಕ ವಾಹನದಟ್ಟಣೆ ಇರುವ ಕಾರಿಡಾರ್‌ಗಳಲ್ಲಿ ಬಸ್‌ ಆದ್ಯತಾ ಪಥಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಬಳ್ಳಾರಿ ರಸ್ತೆ, ಹಳೆಯ ಮದ್ರಾಸ್‌ ರಸ್ತೆ, ಹಳೆಯ ವಿಮಾನ ನಿಲ್ದಾಣ ರಸ್ತೆ, ಸರ್ಜಾಪುರ ರಸ್ತೆ,  ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ, ಕನಕಪುರ ರಸ್ತೆ, ವೆಸ್ಟ್‌ ಆಫ್ ಕಾರ್ಡ್‌ ರೋಡ್‌, ಹೊರವರ್ತುಲ ರಸ್ತೆ. ಈ ಪೈಕಿ ಹೊರವರ್ತುಲ ರಸ್ತೆಯಲ್ಲಿ ಈಗಾಗಲೇ ಕಾಮಗಾರಿ ನಡೆದಿದೆ.  ತುಮಕೂರು ರಸ್ತೆ, ಹಳೆಯ ಮದ್ರಾಸ್‌ ರಸ್ತೆ, ಹೊಸೂರು ರಸ್ತೆಗೆ ವಿನ್ಯಾಸ ಸಿದ್ಧಗೊಂಡಿದೆ.

ಲಾಕ್‌ಡೌನ್‌ನಿಂದ ಬಸ್‌ ಆದ್ಯತಾ ಪಥ ಕಾಮಗಾರಿಗೆ ತುಸು ಹಿನ್ನಡೆ ಉಂಟಾಗಿತ್ತು. ಪಥ ನಿರ್ಮಾಣಕ್ಕೆ ಅಗತ್ಯ ಇರುವ ಬೊಲಾರ್ಡ್‌ಗಳು ಲೂಧಿಯಾನದಿಂದ ಬರಬೇಕಿತ್ತು. ಈಗ ನಿರ್ಬಂಧ ಸಡಿಲಿಕೆ ಆಗಿರುವುದರಿಂದ ಸಮಸ್ಯೆ  ಬಗೆಹರಿದಂತಾಗಿದೆ. ತಿಂಗಳಾಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ.
-ಬಿ.ಎಚ್‌. ಅನಿಲ್‌ ಕುಮಾರ್‌, ಆಯುಕ್ತರು, ಬಿಬಿಎಂಪಿ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next