Advertisement

ಕಂಚಿಗೆ ತೃಪ್ತಿಪಟ್ಟ ವಿಕಾಸ್‌ ಕೃಷ್ಣನ್‌

06:00 AM Sep 01, 2018 | Team Udayavani |

ಜಕಾರ್ತಾ: ಎಡಕಣ್ಣಿಗೆ ಆದ ಗಾಯದಿಂದ ಸೆಮಿಫೈನಲ್‌ನಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದ ಭಾರತದ ಬಾಕ್ಸರ್‌ ವಿಕಾಸ್‌ ಕೃಷ್ಣನ್‌ (75 ಕೆಜಿ) ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.  ಕಜಾಕ್‌ಸ್ಥಾನದ ಅಮನ್‌ಕುಲ್‌ ಅಬಿಖಾನ್‌ ವಿರುದ್ಧ ವಿಕಾಸ್‌ ಕೃಷ್ಣನ್‌ ಸ್ಪರ್ಧಿಸಬೇಕಿತ್ತು. ಆದರೆ ವೈದ್ಯಕೀಯವಾಗಿ ಅವರು ಅನರ್ಹ ಗೊಂಡ ಕಾರಣ ಸೆಮಿಯಲ್ಲಿ ಸ್ಪರ್ಧಿ ಸದೆ ಕಂಚಿನ ಪದಕ ಪಡೆದರು.

Advertisement

“ವಿಕಾಸ್‌ಕೃಷ್ಣನ್‌ ಕಣ್ಣಿನ ರೆಟಿನಾ ದಲ್ಲಿ ಉರಿಯೂತವಾಗಿದೆ. ಹಾಗಾಗಿ ಅವರಿಗೆ ಅವಕಾಶ ನೀಡುವುದು ಅಪಾಯಕಾರಿ. ಅವರಿಗೆ ಹಲವು ವಾರಗಳ ವಿಶ್ರಾಂತಿ ಅಗತ್ಯವಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಂಚು ಗೆಲ್ಲುವ ಮೂಲಕ ವಿಕಾಸ್‌  ಸತತ 3ನೇ ಬಾರಿ ಏಶ್ಯನ್‌ ಗೇಮ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೊದಲು 2010ರಲ್ಲಿ ಚಿನ್ನ, 2014ರಲ್ಲಿ ಕಂಚಿನ ಪದಕ ಗೆದ್ದಿದ್ದರು. ಕ್ವಾರ್ಟರ್‌ನಲ್ಲಿ ಚೀನದ ತೌಹೆತ್‌ ಎರ್ಬಿಕ್‌ ವಿರುದ್ಧ  ಸೆಣಸುವಾಗ ವಿಕಾಸ್‌ ಕಣ್ಣಿಗೆ ಗಾಯವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next