Advertisement

ಸ್ವಾತಂತ್ರ್ಯ ಸಂಭ್ರಮ: ದೂರ ಉಳಿದ ಕ್ರೀಡಾಳುಗಳು

06:00 AM Aug 16, 2018 | Team Udayavani |

ಜಕಾರ್ತಾ: ಏಶ್ಯಾಡ್‌ಗಾಗಿ 9 ಗಂಟೆಗಳ ಸುದೀರ್ಘ‌ ವಿಮಾನ ಪ್ರಯಾಣದ ಬಳಿಕ ಜಕಾರ್ತಾ ತಲುಪಿದ ಭಾರತದ ಕ್ರೀಡಾಪಟುಗಳು ಬುಧವಾರದ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಿಂದ ದೂರ ಉಳಿದರು. ಇಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾರತದ ಹ್ಯಾಂಡ್‌ಬಾಲ್‌ ತಂಡಗಳ ಸದಸ್ಯರು ಮತ್ತು ಅಧಿಕಾರಿಗಳಷ್ಟೇ ಉಪಸ್ಥಿತರಿದ್ದರು. ಉಳಿದವರೆಲ್ಲ ತಮ್ಮ ಕೊಠಡಿಯಲ್ಲೇ ಉಳಿದು ವಿಶ್ರಾಂತಿ ಪಡೆದರು.

Advertisement

ಭಾರತದ ಹಾಕಿ ತಂಡಗಳೆರಡೂ ಮಂಗಳವಾರ ತಡರಾತ್ರಿ ಜಕಾರ್ತಾ ತಲುಪಿದ್ದವು. ಹೀಗಾಗಿ ತಂಡಗಳ ಸದಸ್ಯರೆಲ್ಲ ಕಾರ್ಯಕ್ರಮದಿಂದ ದೂರ ಉಳಿಯಬೇಕಾಯಿತು. ಆದರೆ ಇದೇ ಸಂದರ್ಭ ದಲ್ಲಿ 30 ಸೆಕೆಂಡ್‌ಗಳ ವೀಡಿಯೋವೊಂದರಲ್ಲಿ ಭಾರತೀಯ ಹಾಕಿ ತಂಡದ ನಾಯಕ ಪಿ.ಆರ್‌. ಶ್ರೀಜೇಶ್‌ ಅವರು ಭಾರತದ ಹಾಕಿ ಅಭಿಮಾನಿಗಳಿಗೆ ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ಸಲ್ಲಿಸಿದ್ದಾರೆ. ಏಶ್ಯನ್‌ ಗೇಮ್ಸ್‌ನಲ್ಲಿ ಅಭಿ ಮಾನಿಗಳ  ಬೆಂಬಲ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next