Advertisement

ಕಾಂಗ್ರೆಸ್ ನವರು ತಮ್ಮ ತಪ್ಪಿನ ಅರಿವಾಗಿ ಪಾದಯಾತ್ರೆ ಕೈಬಿಟ್ಟಿದ್ದಾರೆ: ಸಚಿವ ಅಶ್ವತ್ಥನಾರಾಯಣ

03:58 PM Jan 13, 2022 | Team Udayavani |

ಬೆಂಗಳೂರು: ತಮ್ಮ ತಪ್ಪಿನ ಅರಿವಾಗಿ ಕಾಂಗ್ರೆಸ್ ನಾಯಕರು ಇಂದು ಮೇಕೆದಾಟು ಪಾದಯಾತ್ರೆ ಕೈಬಿಟ್ಟಿದ್ದಾರೆ. ಅವರು ಸೂಕ್ತವಾದ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಸಚಿವ ಅಶ್ವಥ ನಾರಾಯಣ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸೋಂಕಿನ ಸರ್ಕಾರದ ಕ್ರಮದ ಬಗ್ಗೆ ಕೋರ್ಟ್ ಸ್ಪಷ್ಟನೆ ಕೇಳಿದೆ. ನಾವು ಪಾದಯಾತ್ರೆಗೆ ಯಾವುದೇ ಅನುಮತಿ ನೀಡಿರಲಿಲ್ಲ. ಕಾಂಗ್ರೆಸ್ ನವರು ನಾವು ಪಾದಾಯಾತ್ರೆ ಮಾಡುತ್ತೇವೆಂದು ಭಂಡತನ ಮೆರೆದಿದ್ದಾರೆ. ಅದನ್ನು ಬಿಡುವುದಿಲ್ಲ ಎನ್ನುವುದನ್ನು ಸರ್ಕಾರ ತೋರಿಸಿದೆ. ಒಂದು ಹಂತಕ್ಕೆ ಬಂದಾಗ ಸರ್ಕಾರ ಎಲ್ಲಾ ಕ್ರಮ ಕೈಗೊಂಡಿದೆ ಎಂದರು.

ಮೇಕೆದಾಟು ಕುಡಿಯುವ ನೀರು ಎಲ್ಲರಿಗೂ ಬೇಕಾಗಿರುವುದು. ರಾಜ್ಯದ ನೆಲ ಜಲ ಬಂದಾಗ ಎಲ್ಲರು ಒಟ್ಟಾಗಿ ಸೇರುತ್ತೇವಿ. ಆದರೆ ರಾಜಕೀಯ ಲಾಭಕ್ಕಾಗಿ ಮಾಡಿದ ಈ ಪಾದಯಾತ್ರೆಗೆ ಸೂಕ್ತ ಸಮಯ, ಸಂಧರ್ಭವಿ ಇದಲ್ಲ ಎಂದರು.

ಇದನ್ನೂ ಓದಿ:ಇದು ತಾತ್ಕಾಲಿಕ ಸ್ಥಗಿತವಷ್ಟೇ.. ಮತ್ತೆ ರಾಮನಗರದಿಂದಲೇ ಪಾದಯಾತ್ರೆ ಮುಂದುವರಿಸುತ್ತೇವೆ

ಇಂದು ಪಾದಯಾತ್ರೆ ಕೈ ಬಿಟ್ಟಿರುವುದು ಸಂತೋಷ. ಕಾಂಗ್ರೆಸ್‌ ನವರಿಗೆ ಮೇಕೆದಾಟು ಯೋಜನೆ ಬಗ್ಗೆ ಕಾಳಜಿ ಇಲ್ಲ. ನಾನು ಹೇಗೆ ನಾಯಕನಾಗಬೇಕು, ಸಿದ್ದರಾಮಯ್ಯನವರಿಗೆ ಹೇಗೆ ಟಾಂಗ್ ಕೊಡಬೇಕು ಎಂಬ ಚಿಂತನೆಯಿದೆ ಎಂದು ಟೀಕೆ ಮಾಡಿದರು.

Advertisement

ಕೋವಿಡ್ ನಿಯಂತ್ರಣ ಕುರಿತು ಮಾತನಾಡಿದ ಅವರು, ಪರೀಕ್ಷೆ ಬಹಳ ಹೆಚ್ಚಿಸಿದ್ದೇವೆ. ರಾಜ್ಯದ ಎಲ್ಲಾ ಕಡೆ ಕೋವಿಡ್ ಪರೀಕ್ಷೆ ಹೆಚ್ಚು ಮಾಡುತ್ತೇವೆ. 16 ನಾಯಕರಿಗೆ ಕೋವಿಡ್ ಕಾಣಿಸಿಕೊಂಡಿದೆ. ಅವರೇ ಅದನ್ನು ನೋಡಿಕೊಳ್ಳಬೇಕು ಎಂದು ಅಶ್ವತ್ಥ ನಾರಾಯಣ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next