Advertisement

ಕಾಂಗ್ರೆಸ್ ಭಿನ್ನಮತ ಮತ್ತೊಂದು ಹಂತಕ್ಕೆ! ಕಪಿಲ್ ಸಿಬಲ್ ವಿರುದ್ಧ ಅಶೋಕ್ ಗೆಹ್ಲೋಟ್ ವಾಗ್ದಾಳಿ

11:56 AM Nov 17, 2020 | keerthan |

ಹೊಸದಿಲ್ಲಿ: ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಪಕ್ಷದ ಹಿರಿಯರ ಮುನಿಸು ಈಗ ಮತ್ತೊಂದು ಆಂತರಿಕ ಭಿನ್ನಮತಕ್ಕೆ ಕಾರಣವಾಗಿದೆ. ಹೈಕಮಾಂಡ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಹಿರಿಯ ನಾಯಕ ಕಪಿಲ್ ಸಿಬಲ್ ವಿರುದ್ಧ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಾಗ್ದಾಳಿ ನಡೆಸಿದ್ದಾರೆ.

Advertisement

ಕಪಿಲ್ ಸಿಬಲ್ ಅವರು ಸಾರ್ವಜನಿಕವಾಗಿ ಹೇಳಿರುವ ಮಾತುಗಳು ಪಕ್ಷದ ಕಾರ್ಯಕರ್ತರ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಪಕ್ಷದಲ್ಲಿನ ಸುಧಾರಣೆ ಕುರಿತಂತೆ ಹೈಕಮಾಂಡ್ ಗೆ ಈ ಹಿಂದೆ ಪತ್ರ ಬರೆದ 23 ನಾಯಕರಲ್ಲಿ ಕಪಿಲ್ ಸಿಬಲ್ ಕೂಡಾ ಒಬ್ಬರು. ಪಕ್ಷದ ವಿಚಾರಗಳ ಕುರಿತು ಚರ್ಚಿಸಲು ಅಗತ್ಯವಾದ ವೇದಿಕೆಯ ಕೊರತೆಯಿಂದಾಗಿ ಒತ್ತಾಯದಿಂದ ಸಾರ್ವಜನಿಕವಾಗಿ ಮಾತನಾಡಿರುವುದಾಗಿ ಸಿಬಲ್ ವಾದಿಸಿದ್ದರು. ಅಲ್ಲದೇ, ಚುನಾವಣೆ ನಿರ್ವಹಣೆಗಾಗಿ ದಕ್ಷ, ಹಿರಿಯ ನಾಯಕರ ಅಗತ್ಯವಿದೆ. ಪಕ್ಷಕ್ಕೆ ಚಿಂತನಾಶೀಲ ನಾಯಕತ್ವ ಬೇಕು ಎಂದು ಸಿಬಲ್ ಹೇಳಿಕೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next