Advertisement

ಔರಂಗಜೇಬ್‌ ಮುಂದೆ ಬಾಗುವವರ ಜತೆ ಮೈತ್ರಿ ಇಲ್ಲ: ಸಂಜಯ್‌ ರವೂತ್‌

10:23 PM Mar 19, 2022 | Team Udayavani |

ಮುಂಬೈ: ಔರಂಗಜೇಬ್‌ ಸಮಾಧಿಯ ಮುಂದೆ ತಲೆಬಾಗಿ ನಮಿಸುವವರ ಜೊತೆಗೆ ಮೈತ್ರಿ ಹೇಗೆ ಸಾಧ್ಯ? ಎಂದು ಶಿವಸೇನೆಯ ನಾಯಕ ಸಂಜಯ್‌ ರವೂತ್‌ ಪ್ರಶ್ನಿಸಿದ್ದಾರೆ.

Advertisement

ಇತ್ತೀಚೆಗೆ, ಶಿವಸೇನೆಯ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಇಂಗಿತವನ್ನು ಆಲ್‌ ಇಂಡಿಯಾ ಮಜ್ಲಿಸ್‌-ಎ-ಇತ್ತೆಹಾದುಲ್‌ ಮುಸ್ಲಿಮೀನ್‌ (ಎಐಎಂಐಎಂ) ಪಕ್ಷದ ನಾಯಕ ಇಮ್ತಿಯಾಜ್‌ ಜಲೀಲ್‌ ವ್ಯಕ್ತಪಡಿಸಿದ್ದರು.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಸಂಜಯ್‌ ರವೂತ್‌, ನಾವು ಔರಂಗಜೇಬ್‌ ಸಮಾಧಿಯ ಮುಂದೆ ತಲೆಬಾಗುವವರ ಜೊತೆಗೆ ಮೈತ್ರಿ ಬೆಳೆಸುವುದಿಲ್ಲ. ಇಂಥ ಯೋಚನೆಯನ್ನೂ ಮಾಡುವುದಿಲ್ಲ. ನಾವು ಛತ್ರಪತಿ ಶಿವಾಜಿಯವರ ಆದರ್ಶಗಳಲ್ಲೇ ಮುಂದುವರಿಯುತ್ತೇವೆ ಎಂದು ಹೇಳಿದ್ದಾರೆ.

“ಇದಲ್ಲದೆ, ಈಗಾಗಲೇ ಶಿವಸೇನೆಯು ಕಾಂಗ್ರೆಸ್‌, ಎನ್‌ಸಿಪಿ ಜೊತೆಗೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರವನ್ನು ರಚಿಸಿದೆ. ಈ ಮೈತ್ರಿಕೂಟದಲ್ಲಿ ನಾಲ್ಕನೇ ಪಕ್ಷವೊಂದನ್ನು ತರುವ ಯಾವುದೇ ಇಚ್ಛೆಯಿಲ್ಲ” ಎಂದು ಸಂಜಯ್‌ ರವೂತ್‌ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next