Advertisement

ಎಂದಿನಂತೆ ಜನಸಂಚಾರ, ತೆರೆದ ಅಂಗಡಿ

09:50 AM Jun 01, 2020 | mahesh |

ಉಡುಪಿ/ಮಂಗಳೂರು: ರಾಜ್ಯ ಸರಕಾರ ಪ್ರತಿ ರವಿವಾರ ಜಾರಿಗೊಳಿಸಲು ನಿರ್ಧರಿಸಲಾಗಿದ್ದ ಸಂಡೆ ಲಾಕ್‌ಡೌನ್‌ಗೆ ಈ ಬಾರಿ ವಿನಾಯಿತಿ ನೀಡಿದ್ದರಿಂದ ಉಭಯ ಜಿಲ್ಲೆಗಳಲ್ಲಿ ಎಂದಿನಂತೆ ಜನಸಂಚಾರ, ಅಂಗಡಿ ಮುಂಗಟ್ಟುಗಳು ತೆರೆದು ಕಾರ್ಯಚಟುವಟಿಕೆ ನಡೆಸಿವೆ.

Advertisement

ಎರಡೂ ಜಿಲ್ಲೆಗಳಲ್ಲಿ ಕೆಎಸ್‌ಆರ್‌ಟಿಸಿ, ಖಾಸಗಿ ಸರ್ವೀಸ್‌ನ ಕೆಲವು ಬಸ್‌ಗಳ ಸಂಚಾರವಿದ್ದರೂ ಪ್ರಯಾಣಿಕರ ಸಂಖ್ಯೆ ವಿರಳ ವಾಗಿತ್ತು. ಮಂಗಳೂರಿನಲ್ಲಿ ಕೆಎಸ್‌ಆರ್‌ಟಿಸಿಯ ಕೆಲವು ರೂಟ್‌ನ ನರ್ಮ್ ಬಸ್‌ಗಳು ಓಡಾಟ ನಡೆಸಿದರೆ ಖಾಸಗಿ ವಾಹನ ಸಂಚಾರ ಎಂದಿನಂತೆಯೇ ಇತ್ತು. ಉಡುಪಿ-ಕುಂದಾಪುರ ಮಧ್ಯೆ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಸರ್ವೀಸ್‌ ಬಸ್‌ಗಳು ಸಂಚಾರ ನಡೆಸಿವೆ. ಸಂಜೆ ಬಳಿಕ ನಗರದ ಕೆಲ ಭಾಗದಲ್ಲಿ ಔಷಧ, ದಿನಸಿ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next