Advertisement

ಹೈಕೋರ್ಟ್‌ ಆದೇಶದಂತೆ ಕೆರೆ ಒತ್ತುವರಿ ತೆರವು

02:36 PM Jul 20, 2019 | Suhan S |

ಕನಕಪುರ: ಹೈಕೋರ್ಟ್‌ ಆದೇಶದ ಮೇರೆಗೆ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಶುಕ್ರವಾರವು ಮುಂದುವರಿದಿದೆ. ತೋಟಗಾರಿಕೆ ಇಲಾಖೆ ಕಟ್ಟಡಗಳು, ಕೃಷಿ ಉತ್ಪನ್ನ ಮಾರುಕಟ್ಟೆ ತೆರವುಗೊಳಿಸಿದ ಜಿಲ್ಲಾ ಮತ್ತು ತಾಲೂಕು ಆಡಳಿತ ಶುಕ್ರವಾರ ದೇವಾಲಯವನ್ನು ತೆರವುಗೊಳಿಸಿತು.

Advertisement

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದ ಅಯ್ಯಪ್ಪಸ್ವಾಮಿ ದೇವಾಲಯವು ನಗರದ ಮುಖ್ಯದ್ವಾರದಲ್ಲಿದ್ದು, ಪ್ರತಿ ದಿನ ನೂರಾರು ಭಕ್ತರಿಗೆ ದರ್ಶನ ನೀಡುತ್ತಿದ್ದ ದೇವಾಲಯ ಇಂದು ಇಲ್ಲವಾಗಿದೆ. ದೇವಸ್ಥಾನದ ಸಮಿತಿ ಸದಸ್ಯರು ಪೂಜಾ ಕಾರ್ಯಗಳನ್ನು ನಡೆಸಿ ಅಯ್ಯಪ್ಪ ಮೂರ್ತಿಯನ್ನು ಮಳಗಾಳಿನ ಸಮುದಾಯ ಭವನದಲ್ಲಿ ಸ್ಥಾಪಿಸಿದ್ದಾರೆ.

ದೇವಾಲಯಕ್ಕೆ ಜಿಲ್ಲಾ ಮತ್ತು ತಾಲೂಕು ಆಡಳಿತ ಯಾವುದೇ ಸೂಕ್ತವಾದ ಜಾಗವನ್ನು ಸೂಚಿಸಿಲ್ಲ. ದೇವಾಲಯದ ಸಮಿತಿ ಸದಸ್ಯರು 20 ಎಕರೆ ಕೆರೆ ಅಭಿವೃದ್ಧಿಗೆ ಹೊರತುಪಡಿಸಿ, 16 ಎಕರೆ 20 ಗುಂಟೆ ಜಾಗದಲ್ಲಿ ಸರ್ಕಾರಿ ವಿವಿಧ ಇಲಾಖೆಗಳ ಕಟ್ಟಡ ನಿರ್ಮಾಣಗೊಂಡು ಉಳಿದ ಜಾಗದಲ್ಲಿ ದೇವಾಲಯ ನಿರ್ಮಾ ಣಕ್ಕೆ ಜಾಗ ನೀಡಬೇಕು ತಹಶೀಲ್ದಾರ್‌ ಆನಂದಯ್ಯಗೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next