ಇದು ನಿವೃತ್ತ ಸೈನಿಕ ಯಶವಂತ ಅವರ ದೈನಂದಿನ ಕಥೆ. ಇದು ಯಶೋ
ಗಾಥೆ, ಪರಿಶ್ರಮಗಾಥೆಯೂ ಹೌದು.
Advertisement
ಇವರು 13 ವರ್ಷಗಳಿಂದ ಅಲ್ಲಿ ಶಿಕ್ಷಕರು. ಮೊದಲು 6 ತಿಂಗಳು ಬೈಕ್ನಲ್ಲಿಯೇ ಸಂಚರಿಸಿದ ಯಶವಂತರಿಗೆ ಬೆನ್ನು ನೋವು ಆರಂಭವಾದಾಗ ಬಸ್ನಲ್ಲಿ ಸಂಚರಿಸಲು ಆರಂಭಿಸಿದರು. ಬೆಳಗ್ಗೆ 7.30ಕ್ಕೆ ಮನೆಬಿಟ್ಟು ಬಸ್ನಲ್ಲಿ ಕಲ್ಯಾಣಪುರ ಸಂತೆಕಟ್ಟೆಗೆ ಬರುತ್ತಾರೆ. ಅಲ್ಲಿಂದ ಬಿದ್ಕಲ್ಕಟ್ಟೆಗೆ ಮತ್ತೂಂದು ಬಸ್. ಅಲ್ಲಿ ಒಂದು ಮನೆಯಲ್ಲಿ ಬೈಕ್ ಇರಿಸಿರುತ್ತಾರೆ. ಮುಖ್ಯ ಶಿಕ್ಷಕಿ ಶಕುಂತಳಾ ನೀಲಾವರದಿಂದ ಬಿದ್ಕಲ್ಕಟ್ಟೆಗೆ ಬಂದಿರುತ್ತಾರೆ. ಅಲ್ಲಿಂದ ಇಬ್ಬರೂ ಜತೆಯಾಗಿ ಹೋಗಿ 9 ಗಂಟೆಯೊಳಗೆ ಶಾಲೆಗೆ ಹಾಜರು.
Related Articles
ಯಶವಂತ್ 17 ವರ್ಷ ಸೇನೆಯಲ್ಲಿದ್ದರು. ಪಿಯುಸಿ ಮುಗಿಸಿ ಟಿಸಿಎಚ್ ಕಲಿತು ಫಲಿತಾಂಶ ಬರುವುದರೊಳಗೆ ಸೇನೆಗೆ ಆಯ್ಕೆಯಾಗಿ 1988ರಿಂದ 2005ರ ವರೆಗೆ ಕೆಲಸ ಮಾಡಿದರು. ನಿವೃತ್ತಿಯ ಬಳಿಕ ಶಿಕ್ಷಕರಾಗಿ ಆಯ್ಕೆಯಾಗಲು ಮತ್ತೆ ಕಲಿಯುವ ಪರಿಶ್ರಮ ಬೇಕಿರಲಿಲ್ಲ. ಸೇನಾವಧಿಯಲ್ಲಿ ಸ್ಮರಣೀಯ ಘಟನೆಗಳೇನು ಎಂದು ಪ್ರಶ್ನಿಸಿದರೆ “ಸೇನೆಯಲ್ಲಿ ನಿತ್ಯವೂ ಸ್ಮರಣೀಯವೇ’ ಎನ್ನುತ್ತಾರೆ.
Advertisement
ಹುದ್ದೆ ಕೈತಪ್ಪುವುದೂ ಸರಳ !ಯಶವಂತ್ ಮತ್ತು ಶಕುಂತಳಾ ಇಬ್ಬರೂ ಒಟ್ಟಿಗೆ ಶಿಕ್ಷಕ ಪರೀಕ್ಷೆ ಬರೆದಿದ್ದರು. ಒಟ್ಟಿಗೆ ನೇಮಕಾತಿ ಆದೇಶ ಪಡೆದರು. ಕೆಲಸಕ್ಕೆ ಸೇರ್ಪಡೆಯಾಗುವಷ್ಟರಲ್ಲಿ ಯಶವಂತರು ಸೇನಾ ಇಲಾಖೆಯ ಕೆಲವು ಪ್ರಕ್ರಿಯೆಗಾಗಿ ಹೋದರು. ಶಕುಂತಳಾ ಮೊದಲು ಕೆಲಸಕ್ಕೆ ಸೇರಿದರು. ಯಶವಂತ್ 10 ದಿನ ತಡವಾಯಿತು. ಹೀಗಾಗಿ ಶಕುಂತಳಾ ಮುಖ್ಯ ಶಿಕ್ಷಕಿ, ಯಶವಂತ್ ಸಹಶಿಕ್ಷಕ. “ಇಂಥ ಶಿಕ್ಷಕರನ್ನು ನೋಡಿಲ್ಲ’
ಕೋಣಿಹರ ಶಾಲೆ ಮುಚ್ಚಿಹೋಗುವುದರಲ್ಲಿತ್ತು. ಯಶವಂತ್ ಮತ್ತು ಶಕುಂತಳಾರಂತಹ ಪ್ರಾಮಾಣಿಕ ಶಿಕ್ಷಕರನ್ನು ನೋಡಿಲ್ಲ. 24 ಗಂಟೆಯೂ ಅವರಿಗೆ ಶಾಲೆಯ ಕನಸು ಇರುತ್ತದೆ.
– ಚಂದ್ರಶೇಖರ ಶೆಟ್ಟಿ, ಉದ್ಯಮಿ, ಮೊಳಹಳ್ಳಿ