Advertisement

ದಾವಣಗೆರೆ ಸಮಾವೇಶಕ್ಕೆ ಆಪ್‌ನ ಕೇಜ್ರಿ, ಮಾನ್‌

12:24 AM Feb 25, 2023 | Team Udayavani |

ಬೆಂಗಳೂರು: ದಾವಣಗೆರೆಯಲ್ಲಿ ಮಾ. 4ರಂದು ಆಮ್‌ಆದ್ಮಿ ಪಕ್ಷ(ಎಎಪಿ) ಹಮ್ಮಿಕೊಂಡಿರುವ ಸಮಾವೇಶದಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಭಾಗಿಯಾಗಲಿದ್ದಾರೆ.

Advertisement

ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾಹಿತಿ ನೀಡಿದ್ದು, ದಾವಣಗೆರೆ ಸಮಾವೇಶದಲ್ಲಿ ರಾಜ್ಯದ ಪ್ರತಿ ಜಿಲ್ಲೆ , ತಾಲೂಕು, ಬ್ಲಾಕ್‌, ಸರ್ಕಲ್‌ ಹಾಗೂ ಬೂತ್‌ ಮಟ್ಟದ ಆಮ್‌ ಆದ್ಮಿ ಪಾರ್ಟಿ ಪದಾಧಿಕಾರಿಗಳು ಭಾಗವಹಿಸಿ, ಅರವಿಂದ್‌ ಕೇಜ್ರಿವಾಲ್‌ ಅವರಿಂದ ಪ್ರತಿಜ್ಞೆ ಸ್ವೀಕರಿಸಲಿದ್ದಾರೆ. ರಾಜ್ಯದಲ್ಲಿ ಜನಾಂದೋಲನವೊಂದು ರೂಪುಗೊಂಡಿದ್ದು, ಇದಕ್ಕೆ ಕೇಜ್ರಿವಾಲ್‌ ಹಾಗೂ ಭಗವಂತ್‌ ಮಾನ್‌ ಅಧಿಕೃತ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next