Advertisement

ದಿಲ್ಲಿ ಸಿಎಸ್‌ ಹಲ್ಲೆ ಪ್ರಕರಣ: ಮೇ 18ರಂದು ಕೇಜ್ರಿವಾಲ್‌ ತನಿಖೆ

03:15 PM May 16, 2018 | udayavani editorial |

ಹೊಸದಿಲ್ಲಿ : ಈ ವರ್ಷ ಫೆಬ್ರವರಿಯಲ್ಲಿ ದಿಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಅವರ ಮೇಲೆ ಆಪ್‌ ಶಾಸಕರಿಂದ ನಡೆಯಿತೆನ್ನಲಾದ ಹಲ್ಲೆ ಬಗ್ಗೆ ಇದೇ ಶುಕ್ರವಾರ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಪ್ರಶ್ನಿಸಲಾಗುವುದು ಎಂದು ವರದಿಗಳು ತಿಳಿಸಿವೆ.

Advertisement

ಈ ಬಗ್ಗೆ ಅರವಿಂದ ಕೇಜ್ರಿವಾಲರಿಗೆ ನೊಟೀಸ್‌ ಜಾರಿಯಾಗಿದ್ದು  ಮೇ 18ರಂದು ಬೆಳಗ್ಗೆ 11 ಗಂಟೆಗೆ ಪೊಲೀಸರು ಕೇಜ್ರಿವಾಲ್‌ ಅವರನ್ನು ಪ್ರಶ್ನಿಸುವರು. 

ಕೇಜ್ರಿವಾಲ್‌ ಅವ ಖಾಸಗಿ ಆಪ್ತ ಕಾರ್ಯದರ್ಶಿ ಬಿಭವ್‌ ಕುಮಾರ್‌ ಅವರನ್ನು ಕಳೆದ ತಿಂಗಳಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಪ್ರಶ್ನಿಸಿದ್ದರು .

ಅಂಶು ಪ್ರಕಾಶ್‌ ಮೇಲಿನ ಹಲ್ಲೆಗೆ ಸಂಬಂಧಿಸಿ ಪೊಲೀಸರು ಈಗಾಗಲೇ 11 ಮಂದಿ ಆಪ್‌ ಶಾಸಕರನ್ನು ಪ್ರಶ್ನಿಸಿದ್ದಾರೆ. ಅಂಶು ಪ್ರಕಾಶ್‌ ಅವರ ಮೇಲೆ ಕಳೆದ ಫೆ.19ರಂದು ಕೇಜ್ರಿವಾಲ್‌ ಅವರ ನಿವಾಸದಲ್ಲೇ ಹಲ್ಲೆ ನಡೆಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next