Advertisement

ಅರವಿಂದ್ ಕೇಜ್ರಿವಾಲ್ ಚುನಾವಣಾ ಪ್ರಚಾರ ರ‍್ಯಾಲಿ; 20 AAP ನಾಯಕರ ಮೊಬೈಲ್ ಫೋನ್ ಕಳವು

03:04 PM Dec 01, 2022 | Kavyashree |

ದೆಹಲಿ: ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ರೋಡ್‌ ಶೋ ವೇಳೆ ಉತ್ತರ ದೆಹಲಿಯ ಮಲ್ಕಾ ಗಂಜ್‌ ಎಂಬಲ್ಲಿ ಶಾಸಕ ಸೇರಿ 20 ಆಮ್‌ ಆದ್ಮಿ ಪಾರ್ಟಿ ನಾಯಕರ ಮೊಬೈಲ್‌ ಫೋನ್‌ ಕಳವು ಮಾಡಿದ ಘಟನೆ ಬುಧವಾರ ನಡೆದಿದೆ.

Advertisement

ಇದನ್ನೂ ಓದಿ:25 ನಿಮಿಷಗಳ ಕಾಲ ಲಿಫ್ಟ್‌ನಲ್ಲಿ ಸಿಲುಕಿಕೊಂಡ ಮಕ್ಕಳು: ವಿಡಿಯೋ ವೈರಲ್ !

ಅರವಿಂದ್‌ ಕೇಜ್ರಿವಾಲ್ ಅವರ ದೆಹಲಿ ಮಹಾನಗರ ಪಾಲಿಕೆ ಚುನಾವಣಾ ಪ್ರಚಾರದ ವೇಳೆ ಈ ಘಟನೆ ನಡೆದಿದ್ದು, ಉತ್ತರ ಡಿಸಿಪಿ ಸಾಗರ್ ಕಲ್ಸಿ ನೀಡಿರುವ ಮಾಹಿತಿ ಪ್ರಕಾರ, ಮಲ್ಕಾ ಗಂಜ್ ಪ್ರದೇಶದಲ್ಲಿ ಎಎಪಿ ರ‍್ಯಾಲಿ ಸಂದರ್ಭ ಕಳ್ಳರು ಮೊಬೈಲ್ ಫೋನ್‌ಗಳನ್ನು ದೋಚಿದ್ದಾರೆ.

ಎಎಪಿ ಶಾಸಕ ಅಖಿಲೇಶ್ ತ್ರಿಪಾಠಿ, ಆಪ್ ನಾಯಕ ಗುಡ್ಡಿದೇವಿ, ಶಾಸಕ ಸೋಮನಾಥ್ ಭಾರ್ತಿ ಅವರ ಕಾರ್ಯದರ್ಶಿ ಈ ಕುರಿತು ದೂರು ನೀಡಿದ್ದು, ಆ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಲಾಗಿದೆ.

250 ವಾರ್ಡ್‌ಗಳ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಡಿಸೆಂಬರ್ 4 ರಂದು ನಡೆಯಲಿದ್ದು, ಡಿಸೆಂಬರ್ 7 ರಂದು ಮತ ಎಣಿಕೆ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next