Advertisement

ಯತ್ನಾಳ್ ಪಕ್ಷದಿಂದ ಹೊರ ಹಾಕುವಂತಹ ವ್ಯಕ್ತಿ : ಅರುಣ್ ಸಿಂಗ್

09:16 PM Apr 09, 2021 | Team Udayavani |

ಬೆಳಗಾವಿ :  ಬಸನಗೌಡ ಪಾಟೀಲ್ ಯತ್ನಾಳ್ ಹೆಸರನ್ನು ನಾನು ತೆಗೆದುಕೊಳ್ಳುವುದಿಲ್ಲ. ಆ ವ್ಯಕ್ತಿಯ ಬಗ್ಗೆ ಮಾತನಾಡಿದರೆ ಆತನ ಪ್ರಸಿದ್ಧಿ ಹೆಚ್ಚಾಗುತ್ತದೆ. ಯತ್ನಾಳ್ ಬಗ್ಗೆ ಪ್ರಶ್ನೆ ಕೇಳಬೇಡಿ ಎಂದು ಶುಕ್ರವಾರ ಬೆಳಗಾವಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ನೀಡಿದ್ದಾರೆ.

Advertisement

ಪದೇ ಪದೇ ಮುಖ್ಯಮಂತ್ರಿ ಯಡಿಯೂರಪ್ಪ ಬಗ್ಗೆ ಹೇಳಿಕೆ ನೀಡುತ್ತಿರುವ ವಿಜಯಪುರ ಶಾಸಕ ಯತ್ನಾಳ್ ಬಗ್ಗೆ ಮಾತನಾಡಿದ ಅರುಣ್ ಸಿಂಗ್, ಮಾಧ್ಯಮಗಳಿಗೆ ಯತ್ನಾಳ ಮೇಲೆ ನಂಬಿಕೆ ಇರಬಹುದು. ಆದ್ರೆ ಬಿಜೆಪಿಗೆ ಅವರ ಮೇಲೆ ಝೀರೋ ಝೀರೋ ಒನ್ ಪರ್ಸೆಂಟ್ ನಂಬಿಕೆಯೂ ಇಲ್ಲ. ಯತ್ನಾಳ್‌ ಗೆ ನೋಟಿಸ್ ನೀಡಲಾಗಿದೆ ಶೀಘ್ರವೇ ಹೊರಡಿಸಲಾಗುವುದು ಎಂದರು.

ಪಕ್ಷದಿಂದ ಯತ್ನಾಳ್ ರನ್ನು ಹೊರಹಾಕ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,  ಪಕ್ಷದಿಂದ ಹೊರಹಾಕುವಂತ ವ್ಯಕ್ತಿಯೇ ಇದ್ದಾರೆ. ಸದ್ಯದ ಸ್ಟ್ರ್ಯಾಟಜಿಗಳನ್ನು ಮಾಧ್ಯಮಗಳ ಮುಂದೆ ಬಹಿರಂಗ ಪಡಿಸಲ್ಲ. ಇದರ ಹಿಂದೆ ಕೆಲವು ಕಾರಣಗಳಿವೆ. ಅವರನ್ನು  ಈಗ ಹೊರ ಹಾಕಿದರೆ ಸ್ವತಂತ್ರ ಆಗುತ್ತಾರೆ ಎಂದರು.

ಇತ್ತೀಚೆಗೆ ಬಸನಗೌಡ ಪಾಟೀಲ್ ಹೇಳಿಕೆಯೊಂದನ್ನು ನೀಡಿದ್ದು, ಮೇ 2ರ ನಂತರ ಸಿಎಂ ಬದಲಾಗುತ್ತಾರೆ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next