Advertisement

ಲೋಯಾ ಸಾವಿನಿಂದ ನ್ಯಾಯಾಂಗ ಬಂಡಾಯ: ಜೇಟ್ಲಿ ಬ್ಲಾಗ್‌

04:35 PM Apr 20, 2018 | udayavani editorial |

ಹೊಸದಿಲ್ಲಿ : ನ್ಯಾಯಾಧೀಶ ಬೃಜ್‌ ಗೋಪಾಲ್‌  ಹರ್‌ಕಿಶನ್‌ ಲೋಯಾ ಅವರ ಸಾವು “ಬಹುತೇಕ ನ್ಯಾಯಾಂಗ ಬಂಡಾಯವನ್ನು ಸೃಷ್ಟಿಸಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಬ್ಲಾಗ್‌ ಬರೆದಿದ್ದಾರೆ.

Advertisement

ನ್ಯಾಯಮೂರ್ತಿ ಬಿ ಎಚ್‌ ಲೋಯಾ ಅವರ ಸಾವಿನ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕೆಂದು ಕೋರಿ ಸಲ್ಲಿಸಲಾಗಿದ್ದ ಹಲವಾರು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದ ಒಂದು ದಿನದ ತರುವಾಯ ಇಂದು ಶುಕ್ರವಾರ ಮಧ್ಯಾಹ್ನ  ಜೇಟ್ಲಿ  ತಮ್ಮ ಫೇಸ್‌ ಬುಕ್‌ ಪುಟದಲ್ಲಿ ಬ್ಲಾಗ್‌ ಪೋಸ್ಟ್‌ ಮಾಡಿದ್ದಾರೆ. 

ನ್ಯಾಯಾಧೀಶ ಲೋಯಾ ಅವರು ಸಾವು ನೈಸರ್ಗಿಕ ಕಾರಣಗಳಿಂದ ಸಂಭವಿಸಿದ್ದಾಗಿದೆ ಎಂಬುದು ತನಿಖೆಯಿಂದ ಬಹಿರಂಗವಾಗಿದೆ ಎಂದು ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next