Advertisement

ಜೇಟ್ಲಿ ಕೆಲಸಕ್ಕೆ ಹಾಜರ್‌

09:50 AM Aug 24, 2018 | Team Udayavani |

ಹೊಸದಿಲ್ಲಿ: ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿ 3 ತಿಂಗಳ ಕಾಲ ತಮ್ಮ ಸಚಿವ ಸ್ಥಾನದಿಂದ ದೂರ ಉಳಿದಿದ್ದ ಅರ್ಥ ಸಚಿವ ಅರುಣ್‌ ಜೇಟ್ಲಿ ಗುರುವಾರ ಕರ್ತವ್ಯಕ್ಕೆ ಮರಳಿದ್ದಾರೆ. ಪ್ರಧಾನಿ ಮೋದಿ ಸಲಹೆ ಮೇರೆಗೆ ಜೇಟ್ಲಿ ಅವರನ್ನು ವಿತ್ತ ಹಾಗೂ ಕಾರ್ಪೊರೇಟ್‌ ವ್ಯವಹಾರಗಳ ಸಚಿವರನ್ನಾಗಿ ಮರುನೇಮಕ ಮಾಡಲು ರಾಷ್ಟ್ರಪತಿ ಕೋವಿಂದ್‌ ನಿರ್ದೇಶಿಸಿದ್ದು, ಅದರಂತೆ ಜೇಟ್ಲಿ ಗುರುವಾರ ಕಚೇರಿಗೆ ಹಾಜರಾದರು. ಜತೆಗೆ, ವಿತ್ತ ಮತ್ತು ಕಾರ್ಪೊರೆಟ್‌ ವ್ಯವಹಾರ ಸಚಿವಾಲಯಗಳ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿದರು. ಜೇಟ್ಲಿ ಮೇ14ರಂದು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ರೈಲ್ವೇ ಸಚಿವ ಪಿಯೂಷ್‌ ಗೋಯಲ್‌ ಹಂಗಾಮಿ ಅರ್ಥ ಸಚಿವರಾಗಿ ಕರ್ತವ್ಯ ನಿಭಾಯಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next