Advertisement

ಯಲ್ಲಾಪುರ ಜಿಲ್ಲಾ ಕೇಂದ್ರ ಮಾಡಲು ಕಲಾವಿದರ ಒತ್ತಾಯ

04:25 PM Oct 19, 2019 | Team Udayavani |

ಯಲ್ಲಾಪುರ: ಯಲ್ಲಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆಂದು ಆಗ್ರಹಿಸಿ ಶ್ರೀಗುರು ಜಿಲ್ಲಾ ರಂಗಭೂಮಿ ಕಲಾವಿದರ ವೇದಿಕೆ ವತಿಯಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ಉ.ಕ. ಜಿಲ್ಲೆ ಭೌಗೋಳಿಕವಾಗಿ ಘಟ್ಟದ ಮೇಲಿನ ಹಾಗೂ ಘಟ್ಟದ ಕೆಳಗಿನ ತಾಲೂಕುಗಳಿವೆ. ಜನಸಾಮಾನ್ಯರ ಹಿತದೃಷ್ಟಿಯಿಂದ ಹಾಗೂ ಅಭಿವೃದ್ಧಿ ತ್ವರಿತವಾಗಿ ಮಾಡಲು ಜಿಲ್ಲೆಯನ್ನು ವಿಭಜಿಸುವುದು ಸೂಕ್ತವಾಗಿದೆ. ಘಟ್ಟದ ಮೇಲಿನ ಜೋಯಿಡಾ, ದಾಂಡೇಲಿ, ಹಳಿಯಾಳ, ಮುಂಡಗೋಡ, ಯಲ್ಲಾಪುರ, ಶಿರಸಿ, ಸಿದ್ದಾಪುರ ತಾಲೂಕುಗಳಿಗೆ ಮಧ್ಯವರ್ತಿ ಸ್ಥಳವಾಗಿದೆ.

ಕವಡಿಕೇರಿ ಮತ್ತು ಮಾಗೋಡ ಕಾಲನಿಯಲ್ಲಿ ಜಿಲ್ಲಾ ಕೇಂದ್ರ ವಿವಿಧ ಕಚೇರಿಗಳನ್ನು ಮಾಡಲು ಜಾಗ ಸೂಕ್ತವಾಗಿದೆ. ಕಾರಣ ಘಟ್ಟದ ಮೇಲಿನ ಎಲ್ಲಾ ತಾಲೂಕುಗಳಿಗೆ ಮಧ್ಯವರ್ತಿ ಸ್ಥಳವಾದ ಯಲ್ಲಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಶ್ರೀಗುರು ರಂಗಭೂಮಿ ಕಲಾವಿದರ ವೇದಿಕೆ ಜಿಲ್ಲಾಧ್ಯಕ್ಷ ಜೈರಾಮ ಭಟ್ಟ, ಪ್ರಮುಖರಾದ ದಿಲೀಪ ದೊಡ್ಡಮನಿ, ಎಂ.ಎ.ಬಾಗೇವಾಡಿ, ಶ್ರೀಧರ ಮಡಿವಾಳ, ಕೆ.ಎಸ್‌. ಭಟ್ಟ ಆನಗೋಡ, ಶ್ರೀಧರ ಅಣಲಗಾರ, ಐ.ಕೆ. ಬಿರಾದಾರ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next