Advertisement

ಶಾಮ್ಲಿ ಗ್ಯಾಂಗ್‌…ವಿಮಾನದಲ್ಲಿ ಬಂದು ಸರಗಳ್ಳತನ ಮಾಡ್ತಿದ್ರು!

11:22 AM Jul 28, 2021 | Team Udayavani |

ಬೆಂಗಳೂರು: ವಿಮಾನದ ಮೂಲಕ ಎರಡು-ಮೂರು ವರ್ಷಕ್ಕೊಮ್ಮೆ ಒಂದೊಂದು ರಾಜಧಾನಿಗೆ ಹೋಗಿ ಸರಗಳ್ಳತನ ಮಾಡುತ್ತಿದ್ದ ಉತ್ತರ ಪ್ರದೇಶದ ಶಾಮ್ಲಿ ಗ್ಯಾಂಗ್‌ ಬೆಂಗಳೂರು ಗ್ರಾಮಾಂತರ ಮತ್ತುನಗರಪೊಲೀಸರಬಲೆಗೆಬಿದ್ದಿದ್ದೆ. ಉತ್ತರ ಪ್ರದೇಶ ಮೂಲದ ಅರ್ಜುನ್‌ ಕುಮಾರ್‌ ಮತ್ತು ರಾಥೋಡ್‌ ಬಂಧಿತರು. ಅವರಿಂದ ಚಿನ್ನಾಭರಣ, ಎಲೆಕ್ಟ್ರಾನಿಕ್‌ ವಸ್ತುಗಳು ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

Advertisement

ಇದನ್ನೂ ಓದಿ: ಮೊಬೈಲ್ ಅಂಗಡಿಯಲ್ಲಿ ಕಳ್ಳರ ಕೈಚಳಕ : ನಗದು ಸಹಿತ ಲಕ್ಷಾಂತರ ಮೌಲ್ಯದ ಸ್ಮಾರ್ಟ್ ಫೋನ್ ಕಳ್ಳತನ

ಅಲ್ಲದೆ, ಕಳವು ಮಾಡಿದ ಕೆಜಿಗಟ್ಟಲೇ ಚಿನ್ನಾಭರಣವನ್ನು ಮಾರಾಟ ಮಾಡಿ ಗೃಹಉಪಯೋಗಿ ಎಲೆಕ್ಟ್ರಾನಿಕ್‌ ವಸ್ತುಗಳು ಹಾಗೂ ಇತರೆ ದಿನ ಉಪಯೋಗಿ ವಸ್ತುಗಳನ್ನು ಖರೀದಿಸಿದ್ದಾರೆ. ಬಾಕಿ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದರು.

ಉತ್ತರ ‌ಪ್ರದೇಶದ ಶಾಮ್ಲಿ ಎಂಬ ಇಡೀ ಊರೇ ಕಳ್ಳತನದ ಕಸುಬು ಮಾಡಿಕೊಂಡಿದ್ದು, ಶಾಮ್ಲಿ ಗ್ಯಾಂಗ್‌ ಉತ್ತರ ಪ್ರದೇಶ, ಪಂಜಾಬ್‌ನಲ್ಲಿ ಅತೀ ಹೆಚ್ಚು ಸರಗಳ್ಳತನ ಮಾಡಿದೆ. ಇತ್ತೀಚೆಗೆ ವಿಮಾನದಲ್ಲಿ ಬಂದು ಬೆಂಗಳೂರು ಗ್ರಾಮಾಂತರ ಪ್ರದೇಶಗಳಾದ ಸರ್ಜಾಪುರ, ಅನುಗೊಂಡನಹಳ್ಳಿ, ಸೂಲಿಬೆಲೆ, ತಿರುಮಲಶೆಟ್ಟಿಹಳ್ಳಿ, ಹೊಸಕೋಟೆ, ದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿದ್ದರು.

ಅಲ್ಲದೆ, ನಗರ ವ್ಯಾಪ್ತಿಯ ಉತ್ತರ ವಿಭಾಗದ ಚಂದ್ರಾಲೇಔಟ್‌, ರಾಜಾಜಿನಗರ ಠಾಣೆ ವ್ಯಾಪ್ತಿಯಲ್ಲಿ ಚಿನ್ನಾಭರಣ ಕಳವು ಮಾಡಿ ರೈಲುಗಳ ಮೂಲಕ ಪರಾರಿಯಾಗುತ್ತಿದ್ದರು. ಮೂರು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಒಂದೇ ದಿನ ಕೆಜಿಗಟ್ಟಲೆ ಚಿನ್ನಾಭರಣ ಕಳ್ಳತನ ಮಾಡಿದ್ದರು. ಒಮ್ಮೆ ಸರಕಳ್ಳತನ ಮಾಡಿಕೊಂಡು ಹೋದರೆ ಮತ್ತೆ ಮೂರು ವರ್ಷಕ್ಕೆ ಈ ಗ್ಯಾಂಗ್‌ ಅದೇ ರಾಜಧಾನಿಗೆ ಬರುತ್ತಿದ್ದರು. ದೇಶದ ಯಾವದೇ ರಾಜಧಾನಿಗೆ ಹೋದರೂ ವಿಮಾನ ದಲ್ಲೇಹೋಗುತ್ತಾರೆ.ಹಾಗೆಯೇಕಳ್ಳತನ ಮಾಡಿ ರೈಲುಗಳ ಮೂಲಕ ತಮ್ಮ ಊರುಗಳಿಗೆ ಸೇರಿ ಕೊಳ್ಳುತ್ತಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

ಅರ್ಜುನ್‌ ಕುಮಾರ್‌ ಗ್ಯಾಂಗ್‌ನ ಮುಖ್ಯಸ್ಥನಾಗಿದ್ದು, ಇಬ್ಬರು ಆರೋಪಿಗಳು ಜೂನ್‌ನಲ್ಲಿ ರಾಜಧಾನಿಗೆ ಬಂದು, ಸರ್ಜಾಪುರ ಬಳಿ ಬೈಕ್‌ ಕದ್ದು ಸ್ನೇಹಿತನೊಬ್ಬನ ಕೊಠಡಿಯಲ್ಲಿದ್ದರು. ನಗರದ ಹೊರವಲಯ ಪೂರ್ತಿ ಸುತ್ತಿದ್ದರು. ಅದೇ ಸಮಯದಲ್ಲಿ ಸ್ನೇಹಿತನ ಮೂಲಕ ಸಿಎಂ ಕಾರ್ಯಕ್ರಮ, ಪೊಲೀಸ್‌ ಬಂದೋಬಸ್ತ್ ಬಗ್ಗೆ ಮಾಹಿತಿ ಪಡೆದಿದ್ದರು. ಜೂ.30ರಂದು ಮುಖ್ಯ ಮಂತ್ರಿಗಳ ಕಾರ್ಯಕ್ರಮ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಬಿಗಿಪೊಲೀಸ್‌
ಬಂದೋಬಸ್ತ್ ನಿಯೋಜಿಸಲಾಗಿತ್ತು.

ಅದೇ ದಿನ ಸರಗಳ್ಳತನ ಮಾಡಿ ಸಂಜೆ ವೇಳೆಗೆ ಮತ್ತೆ ಸರ್ಜಾಪುರದ ಕೊಠಡಿಗೆ ಹೋಗಿದ್ದರು. ಬಳಿಕ ಚಿನ್ನಾಭರಣ ಎತ್ತಿಕೊಂಡು ಬೈಕ್‌ನ್ನು ಮಾರ್ಗಮಧ್ಯೆ ಬಿಟ್ಟು ರಾತ್ರಿಯೇ ರೈಲಿನಲ್ಲಿ ಪರಾರಿಯಾಗುತ್ತಿದ್ದರು. ಬೈಕ್‌ ಪತ್ತೆ ಹಚ್ಚಿ ಕಾರ್ಯಾಚ ‌ರಣೆ ನಡೆಸಿದಾಗ ಆರೋಪಿಗಳಿಗೆ ಆಶ್ರಯ ನೀಡಿದವನನ್ನು ಬಂಧಿಸಿ ಬಳಿಕ ಆರೋಪಿಗಳ ಪೂರ್ಣ ಮಾಹಿತಿ ಸಂಗ್ರಹಿಸಲಾಗಿತ್ತು. ಬಳಿಕ ಉತ್ತರ ಪ್ರದೇಶಕ್ಕೆ ಆತನನ್ನು ಕರೆದೊಯ್ದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next